ಹಾವೇರಿ ನೈತಿಕ ಪೊಲೀಸಗಿರಿ ಘಟನೆಗೆ ಟ್ವಿಸ್ಟ್

162

ಪ್ರಜಾಸ್ತ್ರ ಅಪರಾಧ ಸುದ್ದಿ

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ ಕ್ರಾಸ್ ಹತ್ತಿರದ ಹೋಟೆಲ್ ವೊಂದರಲ್ಲಿ ಅನ್ಯಕೋಮಿನ ವಿವಾಹಿತ ಮಹಿಳೆಯ ಜೊತೆ ವ್ಯಕ್ತಿಯೊಬ್ಬ ಇದ್ದಾಗ ಗುಂಪೊಂದು ಹಲ್ಲೆ ಮಾಡಿದೆ. ಈ ಸಂಬಂಧ ಅಕ್ಕಿಆಲೂರು ಗ್ರಾಮದ ಅಲ್ತಾಫ್, ಮರ್ದಾನ್ ಸಾಬ್ ಅನ್ನೋ ಇಬ್ಬರನ್ನು ಬಂಧಿಸಲಾಗಿದೆ.

ಘಟನೆಯಲ್ಲಿ ಇನ್ನು ಮೂವರು ತೊಡಗಿಕೊಂಡಿದ್ದು, ತಪ್ಪಿಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ರೂಂನೊಳಗೆ ಬಂದ 5 ಜನರ ಗುಂಪೊಂದು ಬುರ್ಖಾ ಹಾಕಿಕೊಂಡು ಬಂದು ಮಲಗಿದ್ಯಾ ಎಂದು ಪ್ರಶ್ನಿಸಿ ಮಹಿಳೆ ಹಾಗೂ ವ್ಯಕ್ತಿಯನ್ನು ಥಳಿಸಿದ್ದಾರೆ.

ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದು, ಶಿರಸಿಯಿಂದ ಬಂದು ಇಲ್ಲಿ ರೂಮ್ ಮಾಡಿದ್ದರು. ಗಲಾಟೆ ಮಾಡುವಾಗಲೇ ನಮ್ಮ ಮೇಲೆ ರೇಪ್ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಮೆಡಿಕಲ್ ಟೆಸ್ಟ್ ಮಾಡಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಎಲ್ಲವೂ ತಿಳಿದು ಬರಲಿದೆ ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!