ಅಜ್ಜಿ ಅಂದಿದ್ದಕ್ಕೆ ಹಲ್ಲೆ, ಎಫ್ಐಆರ್

166

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಕೆಲವರಿಗೆ ಅಂಕಲ್, ಆಂಟಿ ಎಂದರೆ ಸಿಟ್ಟು ಬರುತ್ತೆ. ಹಾಗೇ ಕರೆದವರಿಗೆ ಬೈಯುತ್ತಾರೆ. ಇನ್ನು ಅಜ್ಜಿ, ಅಜ್ಜ ಅಂದರಂತೂ ಮುಗೀತು ಕಥೆ. ಇಲ್ಲಿ ಆಗಿದ್ದು ಅದೇ, ಕೆ.ಎಂ ದೊಡ್ಡಿಯಿಂದ ಮಂಡ್ಯಕ್ಕೆ ತೆರಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕೆಎಸ್ಆರ್ ಟಿಸಿ ಬಸ್ ನಿರ್ವಾಹಕಿಗೆ ಅಜ್ಜಿ ಅಂದಿದ್ದಾಳೆ. ಆಕೆಗೆ ಕೋಪ ಬಂದು ಕೆನ್ನೆಗೆ ಬಾರಿಸಿಯೇ ಬಿಟ್ಟಿದ್ದಾಳೆ.

ಕಾವ್ಯಶ್ರೀ ಅನ್ನೋ ವಿದ್ಯಾರ್ಥಿನಿ ಬಸ್ ನಿರ್ವಾಹಕಿ ಸೌಭಗ್ಯರನ್ನು ಅಜ್ಜಿ ಟಿಕೆಟ್ ಕೊಡಿ ಎಂದಿದ್ದಾಳೆ. ನಾನು ನಿನಗೆ ಅಜ್ಜಿ ತರ ಕಾಣ್ತೀನಾ ಎಂದು ಬೈದಿದ್ದಾಳೆ. ನಂತರ ಕಪಾಳಕ್ಕೆ ಹೊಡೆದಿದ್ದಾಳೆ. ಇತರೆ ಪ್ರಯಾಣಿಕರು ಸಹಾಯಕ್ಕೆ ಬಂದಿದ್ದಾರೆ.

ಇದರಿಂದ ಕೆಲ ಕಾಲ ಬಸ್ಸಿನಲ್ಲಿ ಗಲಾಟೆಯಾಗಿದೆ. ವಿದ್ಯಾರ್ಥಿನಿ ಬಸ್ ನಿಲ್ಲಿಸಿ ಕೆ.ಎಂ ದೊಡ್ಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಹೀಗಾಗಿ ಬಸ್ ನಿರ್ವಾಹಕಿ ಸೌಭಾಗ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!