ರಾಯಚೂರು: ಟಂಟಂ ಪಲ್ಟಿಯಾಗಿ ಆರು ಜನ ವಿದ್ಯಾರ್ಥಿನಿಯರಿಗೆ ಗಂಭೀರ ಗಾಯವಾದ ಘಟನೆ ರಾಯಚೂರು ಜಿಲ್ಲೆ ಸಿರವಾರ ಪಟ್ಟಣದ ಉಂಚೆಡ್ ಕ್ರಾಸ್ ಬಳಿ ನಡೆದಿದೆ.
ಒಂದೇ ಟಂಟಂನಲ್ಲಿ ಸುಮಾರು 35 ಜನರನ್ನ ಕರೆದುಕೊಂಡು ಬರಲಾಗ್ತಿತ್ತು. ಈ ಒಂದು ಅನಾಹುತದಿಂದ 20ಕ್ಕೂ ಹೆಚ್ಚು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಚಾಲಕನ ನಿಯಂತ್ರಣ ತಪ್ಪಿ ಟಂಟಂ ಪಲ್ಟಿಯಾದ ಪರಿಣಾಮ ಇಷ್ಟೆಲ್ಲ ಅನಾಹುತ ಸಂಭವಿಸಿದೆ.
ಸಿರವಾರದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು, ವಲಯಮಟ್ಟದ ಕ್ರೀಡಾಕೂಟಕ್ಕೆ ಕುರಕುಂದಾಕ್ಕೆ ತೆರಳಿದ್ರು. ಅಲ್ಲಿಂದ ಮರಳಿ ಬರುವಾಗ ಉಂಚೆಡ್ ಕ್ರಾಸ್ ಬಳಿ ಈ ಘಟನೆ ನಡೆದಿದೆ. ಸಿರವಾರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.