ಗೋಲ್ಡನ್ ಸ್ಟಾರ್ ಗಣೇಶ ನಟನೆಯ ಗೀತಾ ಸಿನ್ಮಾದ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ಕನ್ನಡಿಗ ಅನ್ನೋ ಹಾಡನ್ನ ಪವರ್ ಸ್ಟಾರ್ ಪುನೀತರಾಜಕುಮಾರ ಹಾಡಿದ್ದಾರೆ. ಗೀತೆಯ ಸಾಹಿತ್ಯವನ್ನ ನಿರ್ದೇಶಕ ಸಂತೋಷ ಆನಂದರಾಮ ಬರೆದಿದ್ದಾರೆ. ವಿಜಯ ನಾಗೇಂದ್ರ ನಿರ್ದೇಶನ ಮಾಡ್ತಿದ್ದಾರೆ.
ಕನ್ನಡ ಪರ ಚಳವಳಿಯನ್ನ ಉದ್ದೇಶದಲ್ಲಿಟ್ಟುಕೊಂಡು, ಈ ನೆಲ, ಜಲ ಹಾಗೂ ಭಾಷೆಯ ಬಗ್ಗೆ ಸಂದೇಶ ನೀಡಲು ಹೊರಟಿರುವಂತೆ ಕಾಣ್ತಿದೆ. ಚಿತ್ರ ನೋಡಿದ್ಮೇಲೆನೆ ಗೊತ್ತಾಗೋದು ಕಥೆ ಏನು ಅನ್ನೋದು. ಶಿಲ್ಪಾ ಗಣೇಶ ಮತ್ತು ಸೈಯದ ಸಲಾಂ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಗಣೇಶಗೆ ಜೋಡಿ ಶಾನ್ವಿ ಶ್ರೀವಾತ್ಸವ, ಪ್ರಯಾಗ ಮಾರ್ಟಿನ್, ಪಾರ್ವತಿ ಅರುಣ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ದೇವರಾಜ, ರಂಗಾಯಣ ರಘು, ಅಚ್ಯುತಕುಮಾರ ಸೇರಿ ಅನೇಕರು ಅಭಿನಯಿಸಿದ್ದಾರೆ.