ಪ್ರಜಾಸ್ತ್ರ ಅಪರಾಧ ಸುದ್ದಿ
ಹಾವೇರಿ: ಮೂವರನ್ನು ಭೀಕರವಾಗಿ ಹತ್ಯೆ ಮಾಡಿದೆ ಘಟನೆ ಜಿಲ್ಲೆಯ ಹಾನಗಲ್ ತಾಲೂಕಿನ ಯಳ್ಳೂರ ಗ್ರಾಮದಲ್ಲಿ ನಡೆದಿದೆ. ಗೀತಾ ಮರಿಗೌಡ್ರು(32), ಇವರ ಮಕ್ಕಳಾದ ಅಕುಲ್(10) ಹಾಗೂ ಅಕಿಂತಾ(07) ಕೊಲೆಯಾದ ದುರ್ದೈವಿಗಳು.
ಕುಮಾರಗೌಡ ಮರಿಗೌಡ್ರು ಕೊಲೆ ಮಾಡಿದ ಆರೋಪಿ. ತನ್ನ ಅಣ್ಣ ಹೊನ್ನೇಗೌಡನ ಹೆಂಡತಿ, ಮಕ್ಕಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಹೊನ್ನೇಗೌಡ ದುಬೈನಲ್ಲಿ ಕೆಲಸ ಮಾಡುತ್ತಿದ್ದು, ಇಲ್ಲಿನ ವ್ಯವಹಾರಗಳನ್ನು ಆರೋಪ ಕುಮಾರಗೌಡ ನೋಡಿಕೊಳ್ಳುತ್ತಿದ್ದ. ಇತ್ತೀಚೆಗೆ ಊರಿಗೆ ಬಂದಾಗ, ಇನ್ನು ಮುಂದೆ ತನ್ನ ಪತ್ನಿ ಹೆಸರಿನಲ್ಲಿ ವಹಿವಾಟು ನಡೆಸಲು ಹೇಳಿದ್ದಾನೆ. ಇದರಿಂದ ಕೋಪುಗೊಂಡು ಈ ರೀತಿ ಮಾಡಿದ್ದಾನೆ ಎನ್ನಲಾಗುತ್ತಿದೆ.
ಕೊಲೆ ಆರೋಪಿ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಇದಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಹಣಕಾಸಿನ ವಿಚಾರಕ್ಕೆ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ. ಮುಂದಿನ ತನಿಖೆ ನಡೆಯಲಿದೆ ಎಂದು ಎಸ್ಪಿ ಶಿವಕುಮಾರ ಗುಣಾರೆ ತಿಳಿಸಿದ್ದಾರೆ.