ಪ್ರಜಾಸ್ತ್ರ ಸುದ್ದಿ
ಬೀದರ: ಪೆನ್ಷನ್ ಮಂಜೂರು ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಶಿಕ್ಷಕನೊಬ್ಬ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿಬಿದ್ದ ಘಟನೆ ನಗರದ ವಿವೇಕಾನಂದ ಶಾಲೆಯಲ್ಲಿ ನಡೆದಿದೆ. ತುಕಾರಂ ಕಾಂಬಳೆ ಸಿಕ್ಕಿಬಿದ್ದ ಮುಖ್ಯ ಶಿಕ್ಷಕ.
ವಿಜ್ಞಾನ ಶಿಕ್ಷಿಯಾಗಿದ್ದ ಶಶಿಕಲಾ ಅವರ ಪೆನ್ಷನ್ ಮಂಜೂರು ಪ್ರಕ್ರಿಯೆಗೆ 3 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. 1 ಲಕ್ಷದ ಚೆಕ್ ಪಡೆದು 50 ಸಾವಿರ ರೂಪಾಯಿ ಹಣ ಪಡೆಯುವ ಮೂಲಕ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.