ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಪತ್ನಿ ಕರಿಮಣಿ ಮಾಲೀಕ ನೀನಲ್ಲ ಎಂದು ಸೋದರ ಮಾವನ ಜೊತೆಗೆ ರೀಲ್ಸ್ ಮಾಡಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹನೂರ ತಾಲೂಕಿನ ಪಿ.ಜಿ ಪಾಳ್ಯದಲ್ಲಿ ಬುಧವಾರ ರಾತ್ರಿ ನಡೆದಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿದೆ. ಈಗ ಈ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.
ಮೃತ ಕುಮಾರ್ ಪತ್ನಿ ರೂಪಾ ಪ್ರತಿಕ್ರಿಯೆ ನೀಡಿದ್ದು, ನಾನು ಮಾಡಿದ ರೀಲ್ಸ್ ನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿತ್ಯ ಕುಡಿಯುವುದು, ಇಸ್ಪೇಟ್ ಆಡುವುದು ಮಾಡುತ್ತಿದ್ದರು. ಹಿಂದೆನೂ ನಾನು ರೀಲ್ಸ್ ಮಾಡ್ತಿದ್ದೆ. ಅದು ಅವರಿಗೂ ಗೊತ್ತು. ಈಗ ಪತಿ ಕುಟುಂಬಸ್ಥರು ಸುಖಾ ಸುಮ್ಮನೆ ನನ್ನ ಮೇಲೆ ಆರೋಪಿಸುತ್ತಿದ್ದಾರೆ ಎಂದಿದ್ದಾಳೆ.
ಪಿ.ಜಿ ಪಾಳ್ಯದ ಕುಮಾರ್ ಜೊತೆಗೆ ಗುಂಡೇಗಾಲದ ರೂಪಾ ಕೊಟ್ಟು 10 ವರ್ಷಗಳ ಹಿಂದೆ ಮದುವೆ ಮಾಡಲಾಗಿದೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡೂವರೆ ಎಕರೆ ಜಮೀನಿನಲ್ಲಿ ಮೂವರು ಅಣ್ತಂದಿರು ದುಡಿಯುತ್ತಿದ್ದರು. ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಅದನ್ನು ನನ್ನ ಮೇಲೆ ಹಾಕಿದ್ದಾರೆ ಎಂದು ರೂಪಾ ಹೇಳುತ್ತಿದ್ದಾಳೆ. ಪೊಲೀಸ್ ತನಿಖೆಯಿಂದ ಸತ್ಯ ತಿಳಿದು ಬರಬೇಕಿದೆ.