ಪ್ರಜಾಸ್ತ್ರ ಸುದ್ದಿ
ಚಾಮರಾಜನಗರ: ಶೌಚಾಲಯದ ನೆಪದಲ್ಲಿ ವೃದ್ಧೆಯೊಬ್ಬರ ಕೈಗೆ ಅಪರಿಚಿತ ಮಹಿಳೆ ಮಗುವೊಂದನ್ನು ಕೊಟ್ಟು ಪರಾರಿಯಾಗಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಬಸ್ ನಿಲ್ದಾಣದಲ್ಲಿ ನಡೆದಿದೆ.
ಕಲಿಗೌಡನಹಳ್ಳಿ ಗ್ರಾಮದ ಮಹಾದೇವಮ್ಮ ಅನ್ನೋ ವೃದ್ಧೆ ಕೈಗೆ ಹೆಣ್ಣು ಮಗು ಕೊಟ್ಟು, ನಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ ಒಂದಿಷ್ಟು ನೋಡಿಕೊಳ್ಳಿ ಎಂದ ಮಹಿಳೆ ಪರಾರಿಯಾಗಿದ್ದಾಳೆ. ಅಂದಾಜು 10 ತಿಂಗಳ ಮಗು ಇರಬಹುದು ಎನ್ನಲಾಗುತ್ತಿದೆ. ಪೊಲೀಸರು ಮಗುವನ್ನು ಮಕ್ಕಳ ಕಲ್ಯಾಣ ಅಭಿವೃದ್ಧಿ ವ್ಯಾಪ್ತಿಗೆ ನೀಡಿದ್ದು, ಮಹಿಳೆ ಪತ್ತೆ ಕಾರ್ಯ ನಡೆಸಿದ್ದಾರೆ.