ನಾಲ್ವರ ಸಾವಿಗೆ ಬಿಗ್ ಟ್ವಿಸ್ಟ್

206

ಪ್ರಜಾಸ್ತ್ರ ಅಪರಾಧ ಸುದ್ದಿ

ಚಿತ್ರದುರ್ಗ: ಕಳೆದ ಜುಲೈ 12ರಂದು ಜಿಲ್ಲೆಯ ಇಸಾಮುದ್ರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ. ಓರ್ವ ಬಾಲಕನ ಸ್ಥಿತಿ ಗಂಭೀರವಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಈ ಘಟನೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇದೆಲ್ಲದರ ಹಿಂದಿನ ಕೈವಾಡ ಓರ್ವ ಬಾಲಕಿಯದು ಅನ್ನೋದು ತಿಳಿದು ಬಂದಿದೆ.

ತಿಪ್ಪಾನಾಯ್ಕ(46), ಪತ್ನಿ ಸುಧಾಬಾಯಿ(43), ಮಗಳು ರಮ್ಯ(16), ಅಜ್ಜಿ ಗುಂಡಿಬಾಯಿ(75) ಸಾವನ್ನಪ್ಪಿದ್ದರೆ, ಸಹೋದರ ರಾಹುಲ್(18) ಸ್ಥಿತಿ ಗಂಭೀರವಾಗಿತ್ತು. ಈಗ ಆತ ಚೇತರಿಸಿಕೊಳ್ಳುತ್ತಿದ್ದಾನೆ. ಘಟನೆ ಬಳಿಕ ಅವರು ತಿಂದ ಆಹಾರವನ್ನು ವಿಧಿ ವಿಧಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅದರಲ್ಲಿ ವಿಷ ಬೆರೆತಿರುವುದು ತಿಳಿದು ಬಂದಿದ್ದು, ಅದಕ್ಕೆ ಬಾಲಕಿಯೇ ಕಾರಣವೆಂದು ಗೊತ್ತಾಗಿದೆ.




Leave a Reply

Your email address will not be published. Required fields are marked *

error: Content is protected !!