ಸಿಲಿಕಾನ್ ಸಿಟಿ ಜನರಲ್ಲಿ ಭಯ ಮೂಡಿಸಿದ 4 ಚಿರತೆಗಳು!

162

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಿಲಿಕಾನ್ ಸಿಟಿಯ ಜನರಿಗೆ ಇದೀಗ ಚಿರತೆಯ ಆತಂಕ ಮನೆ ಮಾಡಿದೆ. ಕೆಂಗೇರಿ, ಕುಂಬಳಗೋಡು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ತುರಹಳ್ಳಿ ಅರಣ್ಯ ಪ್ರದೇಶದಿಂದ 4 ಚಿರತೆಗಳು ಬಂದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

ಕೆಂಗೇರಿ ಹೊರವಲಯದ ತುರಹಳ್ಳಿ ಹತ್ತಿರ ಪ್ರತ್ಯಕ್ಷವಾದ ಚಿರತೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಇಟ್ಟಿದ್ದಾರೆ. ಇನ್ನು ದೇವನಹಳ್ಳಿ ಸುತ್ತಮುತ್ತ ಸಹ ಚಿರತೆ ಕಾಣಿಸಿಕೊಂಡಿದೆ. ಹೀಗಾಗಿ ಇಲ್ಲಿನ ಕಾರ್ಖಾನೆಗೆ ಬರುವ ಸಿಬ್ಬಂದಿಗೆ ಆತಂಕ ಶುರುವಾಗಿದೆ.

ಇನ್ನು ಕೆಂಗೇರಿ ಸುತ್ತ 5 ಶಾಲೆಗಳಿವೆ. ವಿದ್ಯಾರ್ಥಿಗಳು ನಿರಂತರ ಓಡಾಡುತ್ತಾರೆ. ಜನರಿಗೂ ಭಯ ಮೂಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಚಿರತೆ ಹಿಡಿಯಲು ಶೋಧ ಕಾರ್ಯ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!