ಉಳಿದಿರುವ 4 ಸಚಿವ ಸ್ಥಾನಗಳಿಗೆ ಭರ್ಜರಿ ಲಾಬಿ

235

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು 9 ದಿನಗಳಾಗಿವೆ. 29 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಎರಡು ದಿನಗಳು ಕಳೆದಿವೆ. ಈಗ ಸಚಿವ ಸ್ಥಾನ ಸಿಗದೆ ಅಸಮಾಧಾನ ವ್ಯಕ್ತಪಡಿಸ್ತಿರುವ ನಾಯಕರು ಸಭೆಯ ಮೇಲೆ ಸಭೆ ನಡೆಸುತ್ತಿದ್ದಾರೆ.

ರಮೇಶ ಜಾರಿಕಿಹೊಳಿ ಅವರ ಮನೆಯಲ್ಲಿ ಮಹೇಶ ಕುಮಟಹಳ್ಳಿ, ಅರವಿಂದ ಬೆಲ್ಲದ, ರಾಜುಗೌಡ, ಸಿ.ಪಿ ಯೋಗೇಶ್ವರ ಸೇರಿದಂತೆ ಏಳೆಂಟು ಜನ ಶಾಸಕರು ಸಭೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇನ್ನು 4 ಸ್ಥಾನಗಳು ಖಾಲಿ ಇವೆ. ಹೀಗಾಗಿ ಉಳಿದಿರುವ ಸಚಿವ ಸ್ಥಾನಗಳಿಗಾದರೂ ತಮ್ಮನ್ನ ಪರಿಗಣಿಸಬೇಕು ಅನ್ನೋ ಲಾಬಿ ಶುರುವಾಗಿದೆ.

ಯಡಿಯೂರಪ್ಪ ವಿರುದ್ಧ ಸಿಡಿದೆದ್ದ ಶಾಸಕರಿಗೆ ಸಚಿವ ಸ್ಥಾನ ಸಿಕ್ಕಿಲ್ಲ. ಈಗ ಈ ಶಾಸಕರು ಮತ್ತೆ ಬಂಡಾಯದ ಬಾವುಟ ಹಾರಿಸುತ್ತಾರಾ? ತಮ್ಮಲ್ಲಿಯೇ ಇವರಿಗೆ ಸಚಿವ ಸ್ಥಾನ ನೀಡಿ ಎಂದು ಒತ್ತಡ ಹೇರುವ ಮೂಲಕ ತಮ್ಮ ಅಸಮಾಧಾನವನ್ನ ತಣಿಸಿಕೊಳ್ಳುತ್ತಾರಾ ಅನ್ನೋದು ಸಧ್ಯದ ಪ್ರಶ್ನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!