ಪ್ರಜಾಸ್ತ್ರ ಸುದ್ದಿ
ವಿಜಯಪುರ: ತಾಯಿಯೊಬ್ಬಳು ಹೆಣ್ಣು ಮಗುವನ್ನು ಬಿಟ್ಟು ಹೋದ ಘಟನೆ ಜಿಲ್ಲೆಯ ಮುದ್ದೇಬಿಹಾಳ ಬಸ್ ನಿಲ್ದಾಣದಲ್ಲಿ ನಡೆದಿದೆ.
ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ 4ರಿಂದ 5 ತಿಂಗಳ ಹೆಣ್ಣು ಹಸುಗೂಸನ್ನು ನೀಲಿ ದುಪ್ಪಾಟದಲ್ಲಿಟ್ಟು ನಿಲ್ದಾಣದಲ್ಲೇ ಬಿಟ್ಟು ಪರಾರಿಯಾಗಿದ್ದಾಳೆ.
ಬಿಟ್ಟು ಹೋಗಿರುವ ಮಗುವನ್ನು ಮುದ್ದೇಬಿಹಾಳ ಪೊಲೀಅ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಇಂದು ಬೆಳಗ್ಗೆ ಬಸವನಬಾಗೇವಾಡಿಯ ತಿಪ್ಪೆಯೊಂದರಲ್ಲಿ ಮಗು ಪತ್ತೆಯಾಗಿದೆ. ಈಗ ಮುದ್ದೇಬಿಹಾಳದಲ್ಲಿ ಇಂತಹದ್ದೇ ಘಟನೆ ನಡೆದಿರುವುದು ನಿಜಕ್ಕೂ ದುರಂತ.