ಪ್ರಜಾಸ್ತ್ರ ಸುದ್ದಿ
ಜಬಲ್ಪುರ್: ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಐದು ವರ್ಷದ ಮಗುವೊಂದು ಪ್ರಾಣ ಕಳೆದುಕೊಂಡ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಗಂಟೆಗಟ್ಟಲೇ ಆಸ್ಪತ್ರೆ ಆವರಣದಲ್ಲಿ ಕುಟುಂಬಸ್ಥರು ಕಾಯುತ್ತಾ ಕುಳಿತರೂ ವೈದ್ಯರು ಬಂದಿಲ್ಲ. ಇದರ ಪರಿಣಾಮ ಐದು ವರ್ಷದ ರಿಷಿ ಮೃತಪಟ್ಟಿದ್ದಾನೆ.
ಮಧ್ಯಪ್ರದೇಶದಲ್ಲಿ ಆರೋಗ್ಯ ಇಲಾಖೆ ಎಷ್ಟು ಹದಗೆಟ್ಟು ಹೋಗಿದೆ ಅನ್ನೋದು ಸದಾ ಒಂದಲ್ಲ ಒಂದು ಪ್ರಕರಣಗಳು ಹೊರ ಬರುತ್ತಲೇ ಇವೆ. ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯದ ಮಾನ ಮರ್ಯಾದೆ ಹೋಗುತ್ತಿದ್ದರೂ, ಅಮಾಯಕ ಬಡವರ ಜೀವ ಉಳಿಸಲು ಆಗದೆ ಹೋಗಿದೆ ಇಲ್ಲಿನ ಬಿಜೆಪಿ ಸರ್ಕಾರಕ್ಕೆ.
ಸಿಎಂ ಶಿವರಾಜ್ ಸಿಂಗ್ ಚೌವ್ಹಾಣ್ ನೇತೃತ್ವದ ಬಿಜೆಪಿ ಸರ್ಕಾರದ ದುರಾಡಳಿತ, ರಾಜ್ಯದಲ್ಲಿ ಆರೋಗ್ಯ ಇಲಾಖೆಯ ಅತಿ ಕಳಪೆ ಮಟ್ಟದ ಕಾರ್ಯವೈಖರಿಯಿಂದ ಸಂಜಯ್ ಪಂಡ್ರೆ ಅನ್ನೋ ವ್ಯಕ್ತಿಯ ಕುಟುಂಬ ಐದು ವರ್ಷದ ಮಗುವನ್ನು ಕಳೆದುಕೊಂಡಿದೆ. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿದ್ದರೂ, ಸರ್ಕಾರ ಕೈಕಟ್ಟಿಕೊಂಡು ಕುಳಿತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.