ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬೆಂಗಳೂರು: ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರು 50 ಲಕ್ಷ ರೂಪಾಯಿ ಸಾಲ ಪಡೆದು ಮೋಸ ಮಾಡಿದ್ದಾರೆ ಎಂದು ಕೆಸಿಎನ್ ಚಂದ್ರಶೇಖರ್ ಎಂಬುವರ ನಡುವೆ ವಿವಾದ ನಡೆದು ಕೋರ್ಟ್ ಮೆಟ್ಟಿಲು ಏರಿತ್ತು. ಇದೀಗ ಕೋರ್ಟ್ ದ್ವಾರಕೀಶ್ ಗೆ ಸಾಲ ವಾಪಸ್ ಮಾಡುವಂತೆ ಡೆಡ್ ಲೈನ್ ನೀಡಿದೆ.
2013ರಲ್ಲಿ ಚಾರುಲತಾ ಸಿನಿಮಾಗಾಗಿ ಸಾಲ ಮಾಡಿದ್ದರು. ಅದನ್ನು ವಾಪಸ್ ಕೇಳಿದರೆ ತಮ್ಮ ವಿರುದ್ಧವೇ ಕೊಲೆ ಕೇಸ್ ದಾಖಲಿಸಿದ್ದರು ಎಂದು ಕೆಸಿಎನ್ ಹೇಳಿದ್ದು, ಈ ಸಂಬಂಧ ಕೋರ್ಟ್ ಮೆಟ್ಟಿಲು ಹತ್ತಿತ್ತು. ಕೆಳ ಹಂತದ ನ್ಯಾಯಾಲಯದ ಆದೇಶವನ್ನು ಸೆಷನ್ಸ್ ಕೋರ್ಟ್ ಎತ್ತಿ ಹಿಡಿದಿದ್ದು 1 ತಿಂಗಳಲ್ಲಿ 52 ಲಕ್ಷ ರೂಪಾಯಿ ಸಾಲ ವಾಪಸ್ ಮಾಡಬೇಕು ಎಂದು ಹೇಳಿದೆ.