ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ ನಟನೆಯ ಆಯುಷ್ಮಾನ್ ಭವ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಪಿ.ವಾಸು ನಿರ್ದೇಶನದ ಸಿನ್ಮಾ ಮತ್ತೊಂದು ಭೂತದ ಕಥೆ ಹೇಳುತ್ತಾ ಅನ್ನೋ ಪ್ರಶ್ನೆ ಮೂಡಿದೆ. ಸಸ್ಪೆನ್ಸ್ ಥ್ರಿಲ್ಲರ್ ಮೂವಿ ನೀಡುವಲ್ಲಿ ಪಿ.ವಾಸು ಎತ್ತಿದ ಕೈ. ಅದು ಆಯುಷ್ಮಾನ್ ಭವ ಚಿತ್ರದಲ್ಲಿಯೂ ಕಾಣಿಸ್ತಿದೆ.
ಅನಂತನಾಗ, ಸುಹಾಸಿನಿ, ರಚಿತಾ ರಾಮ, ನಿಧಿ ಸುಬ್ಬಯ್ಯ, ಶಿವಾಜಿ ಪ್ರಭು, ಸಾಧು ಕೋಕಿಲಾ, ರಂಗಾಯಣ ರಘು, ಅವಿನಾಶ ಸೇರಿದಂತೆ ಬಹುದೊಡ್ಡ ತಾರಾ ಬಳಗವಿದೆ. ಕೂಡು ಕುಟುಂಬದ ಕಥೆಯಲ್ಲಿ ಕುತೂಹಲ ಮೂಡಿಸುವ ವಿಷ್ಯ ಸೃಷ್ಟಿಸಿ ಪಿ.ವಾಸು ಗೆದ್ದಿದ್ದಾರೆ. ಇದು ಅದೇ ರೀತಿ ಅನಿಸುತ್ತಿದೆ.
ಶಿವಣ್ಣ ಈಗಾಗ್ಲೇ ಶಿವಲಿಂಗ ಸಿನ್ಮಾದಲ್ಲಿ ಪಿ.ವಾಸು ಜೊತೆ ಕೆಲಸ ಮಾಡಿದ್ದಾರೆ. ಹಿರಿಯ ನಟ, ನಿರ್ಮಾಪಕ ದ್ವಾರಕೀಶ ಬ್ಯಾನರ್ ನಲ್ಲಿ ಬರ್ತಿರುವ 50ನೇ ಸಿನ್ಮಾ. ಕಳೆದ 50 ವರ್ಷಗಳಿಂದ ಚಿತ್ರ ನಿರ್ಮಾಣದಲ್ಲಿ ದ್ವಾರಕೀಶ ಪ್ರೊಡಕ್ಷನ್ ತೊಡಗಿಸಿಕೊಂಡಿದೆ. ಇದರ ಜೊತೆಗೆ ಸಂಗೀತ ನೀಡಿರುವ ಗುರು ಕಿರಣಗೆ ಇದು 100ನೇ ಸಿನಿಮಾ. ಹೀಗೆ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಚಿತ್ರ ಆಯುಷ್ಮಾನ್ ಭವ ಆಗಿದೆ. ಆಪ್ತಮಿತ್ರ, ಆಪ್ತರಕ್ಷಕ, ಶಿಲಿವಲಿಂಗ ಅನ್ನೋ ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ಮೂವಿ ನೀಡಿರುವ ಪಿ.ವಾಸು ಈ ಬಾರಿ ಏನು, ಯಾವ ರೀತಿ, ಯಾವ ವಿಚಾರ ಹೇಳ್ತಿದ್ದಾರೆ ಅನ್ನೋ ಕುತೂಹಲ ಮೂಡಿದೆ.