2ನೇ ಬಾರಿ ಸಿಎಂ ಆದ ಖಟ್ಟರ್.. ದುಷ್ಯಂತ ಡಿಸಿಎಂ..

330

ಚಂಡೀಗಢ: ಹರಿಯಾಣದ ಮುಖ್ಯಮಂತ್ರಿಯಾಗಿ ಮನೋಹರ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ರು. ಉಪ ಮುಖ್ಯಮಂತ್ರಿಯಾಗಿ ಜನ ನಾಯಕ್ ಜನತಾ ಪಕ್ಷದ ದುಷ್ಯಂತ ಚೌಟಾಲಾ ಪ್ರತಿಜ್ಞಾ ವಿಧಿ ಸ್ವೀಕರಿಸಿದ್ರು.

ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಸತ್ಯದೇವ ನಾರಾಯಣ ಪ್ರಮಾಣ ವಚನ ಬೋಧಿಸಿದ್ರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ ನಡ್ಡಾ, ಶಿರೋಮಣಿ ಅಕಾಲಿ ದಳದ ಮುಖಂಡ ಪ್ರಕಾಶ ಸಿಂಗ್ ಬಾದಲ್ ಸೇರಿದಂತೆ ಅನೇಕರು ಭಾಗವಹಿಸಿದ್ರು.

ಪ್ರಮಾಣ ವಚನ ಸ್ವೀಕರಿಸಿದ ದುಷ್ಯಂತ ಚೌಟಾಲಾ

2019ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಸರ್ಕಾರ ರಚನೆಗೆ 6 ಸ್ಥಾನಗಳ ಅವಶ್ಯಕತೆಯಿತ್ತು. ಬಿಜೆಪಿಗೆ ಜೆಜೆಪಿ ಹಾಗೂ ಪಕ್ಷೇತರ ಶಾಸಕರು ಸಾಥ್ ನೀಡಿದ್ರು. ಇವರ ಜೊತೆಗೂಡಿ ಬಿಜೆಪಿ ಸರ್ಕಾರ ರಚನೆ ಮಾಡಿತು. ಈ ಮೂಲಕ ಮನೋಹರ ಲಾಲ್ ಖಟ್ಟರ್ 2ನೇ ಬಾರಿಗೆ ಸಿಎಂ ಆದ್ರು. ಕಾಂಗ್ರೆಸ್ ಗೆ ಮತ್ತೆ ನಿರಾಸೆ ಆಯ್ತು.




Leave a Reply

Your email address will not be published. Required fields are marked *

error: Content is protected !!