ಚಂಡಿಗಢ: ಹರಿಯಾಣದಲ್ಲಿ ಬಿಜೆಪಿ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡ್ತಿದೆ. ಈ ಬಾರಿ ಜೆಜೆಪಿ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡ್ತಿದೆ. 2ನೇ ಬಾರಿಗೆ ಸಿಎಂ ಆಗಿ ಮನೋಹರ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಜೆಜೆಪಿ ಮುಖ್ಯಸ್ಥ ದುಷ್ಯಂತ ಚೌಟಾಲಾ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಮಧ್ಯಾಹ್ನ 2.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಚಂಡಿಗಢದಲ್ಲಿ ನಡೆದ ಬಿಜೆಪಿ ಸಭೆಯ ಬಳಿಕ, ರಾಜ್ಯಪಾಲ ಸತ್ಯದಿಯೋ ನಾರೈನ್ ಭೇಟಿಯಾದ ಬಿಜೆಪಿ ನಿಯೋಗ ಸರ್ಕಾರ ರಚನೆಗೆ ಅನುಮತಿ ಕೇಳಿತ್ತು. ಇದಕ್ಕೆ ಗ್ರೀನ್ ಸಿಗ್ನಲ್ ನೀಡಿರುವ ರಾಜ್ಯಪಾಲರು, ಇಂದು ಮಧ್ಯಾಹ್ನ ಸಮಯ ನಿಗದಿ ಮಾಡಿದ್ದಾರೆ. ಅದರಂತೆ ದೀಪಾವಳಿ ಹಬ್ಬದ ದಿನವೇ ಖಟ್ಟರ್, ಚೌಟಾಲಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.