ಆಕೆಯನ್ನ ಕೊಂದ.. ತಾನು ಆತ್ಮಹತ್ಯೆ ಮಾಡಿಕೊಂಡ..

673

ಪ್ರಜಾಸ್ತ್ರ ಅಪರಾಧ ಸುದ್ದಿ

ಬೆಂಗಳೂರು: ತನ್ನೊಂದಿಗೆ ಸಹಜೀವನ ನಡೆಸ್ತಿದ್ದವಳನ್ನ ಕೊಂದು ಬಳಿಕ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಮ್ಯ(35) ಕೊಲೆಯಾದ ದುರ್ದೈವಿ. ಚಿಕ್ಕಮೊಗ(55) ಆತ್ಮಹತ್ಯೆ ಮಾಡಿಕೊಂಡವನು ಅನ್ನೋದು ತಿಳಿದು ಬಂದಿದೆ.

ಮಳವಳ್ಳಿ ತಾಲೂಕಿನ ನಲ್ಲೂರ ಗ್ರಾಮದ ರಮ್ಯ ಹಾಗೂ ಸೆಕ್ಯೂರಿಟಿ ಗಾರ್ಡ್ ಚಿಕ್ಕಮೊಗ ನಡುವೆ ಪ್ರೀತಿ ಇತ್ತು. ಇವರಿಬ್ಬರಿಗೂ ಬೇರೆ ಬೇರೆ ಮದುವೆಯಾಗಿದ್ದರೂ, ತಂತಮ್ಮ ಸಂಸಾರ ಬಿಟ್ಟು ಕೋಣಕುಂಟೆಯ ವೀವರ್ಸ್ ಕಾಲೋನಿಯ 8ನೇ ಕ್ರಾಸ್ ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಸಹಜೀವನ ನಡೆಸ್ತಿದ್ದರು.

ರಮ್ಯಳ ಕೊಲೆ ಯಾಕೆ ಆಗಿದೆ. ಚಿಕ್ಕಮೊಗ ಯಾಕೆ ಆತ್ಮಹತ್ಯೆ ಮಾಡಿಕೊಂಡ ಅನ್ನೋದರ ಕುರಿತು ತನಿಖೆ ನಡೆಯುತ್ತಿದೆ. ಈ ಸಂಬಂಧ ಕೋಣಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!