ಹರಿಯಾಣ ಸಿಎಂ ಮನೋಹರ ಲಾಲ್ ಖಟರ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನ ಸತ್ತ ಇಲಿಗೆ ಹೋಲಿಸಿದ್ದು ವಿವಾದವಾಗಿದೆ.
ಚುನಾವಣೆ ರ್ಯಾಲಿಯೊಂದರಲ್ಲಿ ಮಾತ್ನಾಡಿರುವ ಸಿಎಂ ಖಟರ್ ಮಾತು ಇದೀಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹೊಸ ಅಧ್ಯಕ್ಷರನ್ನ ಹುಡುಕುತ್ತಿದ್ದಾರೆ. ಸೋನಿಯಾ ಗಾಂಧಿಯನ್ನ ಮುಖ್ಯಸ್ಥೆಯನ್ನಾಗಿ ಮಾಡಿದ್ದಾರೆ. ಸೋನಿಯಾ ಗಾಂಧಿ ಅವರನ್ನ ನೇಮಕ ಮಾಡಿರುವುದು ಸತ್ತ ಇಲಿಗೆ ಮಾಡಿದಂತಾಗಿದೆ ಎಂದು ಹೇಳಿರುವುದು ಭಾರಿ ವಿವಾದ ಸೃಷ್ಟಿಸಿದೆ.
ಇದಕ್ಕೆ ಹರಿಯಾಣ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಸಿಎಂ ಖಟರ್ ಅಲ್ಲ. ಖಚ್ಛರ್ ಅಂತಾ ತಿರುಗೇಟು ನೀಡಿದೆ.