ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕಳೆದ ಫೆಬ್ರವರಿ 14, 2019ರಲ್ಲಿ ಕಣಿವೆ ನಾಡಿನ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ದಾಳಿಗೆ ಎರಡು ವರ್ಷ ತುಂಬಿದೆ. ದೇಶದ ವೀರ ಯೋಧರನ್ನ ಕಳೆದುಕೊಂಡ ಭಾರತೀಯ ಅಕ್ಷರಶಃ ಅಂದು ಶೋಕಸಾಗರದಲ್ಲಿ ಮುಳಗಿದ್ರು. ಆ ಕಹಿ ಘಟನೆಯನ್ನ ಕರಾಳ ದಿನವಾಗಿ ದೇಶದಲ್ಲಿ ಆಚರಿಸಲಾಗ್ತಿದೆ.
ರಾಷ್ಟ್ರದ ಎಲ್ಲ ಕಡೆ ದೇಶಕ್ಕಾಗಿ ಪ್ರಾಣ ಕೊಟ್ಟ ಯೋಧರನ್ನ ನೆನಪಿಸಿಕೊಂಡು ಅವರಿಗೊಂದು ಸಲಾಂ ಹೇಳಲಾಗ್ತಿದೆ. ಅದೆ ರೀತಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಹ ಕರಾಳ ದಿನ ಆಚರಣೆ ಮಾಡಲಾಗ್ತಿದೆ. ಮೂಲಕ ತಾಯಿ ನೆಲಕ್ಕಾಗಿ ಪ್ರಾಣ ಅರ್ಪಿಸಿದ ಸೈನಿಕರ ಸ್ಮರಣೆ ಮಾಡಲಾಗ್ತಿದೆ.