ಬೆಂಗಳೂರು: ಕೋವಿಡ್ 19 ಭೀತಿ ಹೆಚ್ಚಾಗ್ತಿದ್ದು, ಕರ್ನಾಟಕದ ತುಂಬಾ ಹೈಅಲರ್ಟ್ ವಾತಾವರಣ ನಿರ್ಮಾಣವಾಗಿದೆ. ಈಗಾಗ್ಲೇ ಕಾಲೇಜುಗಳಿಗೆ ಒಂದು ವಾರ ರಜೆ ಘೋಷಣೆ ಮಾಡಿದ್ದ ಶಿಕ್ಷಣ ಇಲಾಖೆ, ಇದೀಗ 7 ರಿಂದ 9ನೇ ತರಗತಿ ಮಕ್ಕಳ ಪರೀಕ್ಷೆ ಮುಂದೂಡಲು ಸೂಚಿಸಿದೆ.
ಶಿಕ್ಷಣ ಸಚಿವ ಸುರೇಶಕುಮಾರ ಅವರು ಸೂಚನೆ ನೀಡಿದ್ದು, ಕರೋನಾ ವೈರಸ್ ನಿಂದ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹೀಗಾಗಿ 7, 8 ಹಾಗೂ 9ನೇ ತರಗತಿ ಮಕ್ಕಳ ಪರೀಕ್ಷೆಯನ್ನ ಮಾರ್ಚ್ 31ರ ವರೆಗೂ ಮುಂದೂಡಬೇಕೆಂದು ಸೂಚಿಸಿದ್ದಾರೆ. ಇದನ್ನ ಪಾಲಿಸದ ಶಾಲೆಗಳ ವಿರುದ್ಧ ಸೂಕ್ತ ಕ್ರಮವನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ.