73 ಕೋಟಿ ಮೌಲ್ಯದ ನೀರು ಕದ್ದವರ ವಿರುದ್ಧ ಕೇಸ್

372

ಮುಂಬೈ: ದಕ್ಷಿಣ ಮುಂಬೈನ ಕಲ್ಬಾದೇವಿ ಹತ್ತಿರ ಅಕ್ರಮವಾಗಿ ಎರಡು ಬಾವಿಗಳಿಂದ ಬರೋಬ್ಬರಿ 72.18 ಕೋಟಿ ಮೌಲ್ಯದ ನೀರು ಕದ್ದಿರುವ ಆರೋಪದ ಮೇಲೆ 6 ಮಂದಿ ಮೇಲೆ ಕೇಸ್ ದಾಖಲಾಗಿದೆ.

ಪಾಡ್ಯಾ ಬಂಗಲೆಯ ಒಳಗೆ ಪರವಾನಿಗೆ ಪಡೆಯದೆ ಅಕ್ರಮವಾಗಿ ಎರಡು ಬಾವಿಗಳನ್ನ ಕೊರೆಯಲಾಗಿದೆ. ಇದರಿಂದ ಕಳೆದ 11 ವರ್ಷಗಳಿಂದ ನೀರು ಕಳ್ಳತನ ನಡೆದಿದೆ ಎಂದು ಸುರೇಶಕುಮಾರ ಧೋಕಾ ಎಂಬುವವರು, ಆಝಾದ್ ಮೈದಾನ ಪೊಲೀಸ್ರಿಗೆ ದೂರು ನೀಡಿದ್ರು.

2006ರಿಂದ 17ರ ವರೆಗಿನ ವಿದ್ಯುತ್ ಮೀಟರ್ ಗಳಲ್ಲಿ ದಾಖಲಾದ ಶುಲ್ಕದ ಆಧಾರದ ಮೇಲೆ 73.18 ಕೋಟಿ ಮೌಲ್ಯದ ನೀರು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಬಂಗಲೆಯ ಮಾಲೀಕ ತ್ರಪುರಪ್ರಸಾದ ಪಾಂಡ್ಯಾ ಸೇರಿದಂತೆ 6 ಮಂದಿ ವಿರುದ್ಧ ದೂರು ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!