ಅಥಣಿಯಲ್ಲಿ 1,150 ಕುಟುಂಬಗಳಿಗೆ ದಿನಸಿ ವಿತರೆಣೆ

322

ಅಥಣಿ: ದೇಶ್ಯಾದ್ಯಂತ ಕರೋನಾ ವೈರಸ್‌ ದಿಂದ ಕೂಲಿ ಕಾರ್ಮಿಕರು ಹಾಗೂ ಬಡಕುಟುಂಬಗಳು ಕೆಲಸವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಅನೇಕರು ತಮ್ಮ ಕೈಲಾದ ಸಹಾಯ ಮಾಡ್ತಿದ್ದಾರೆ. ಅದೇ ರೀತಿ ಇದೀಗ ಎಕ್ಷನ್ ಏಡ್ ಸಂಸ್ಥೆ ಸಹ ಮುಂದೆ ಬಂದಿದೆ.

ಬೆಂಗಳೂರಿನ ಎಕ್ಷನ್ ಏಡ್ ಸಂಸ್ಥೆಯಿಂದ, ಒಂದು ಕುಟುಂಬಕ್ಕೆ 2,157 ರೂಪಾಯಿ ಮೌಲ್ಯದ ರೇಷನ್ ನ್ನ ಇಂದು ತಾಲೂಕಿನ ದರೂರ ಗ್ರಾಮದ ಸುಮಾರು 1,150 ಜನರಿಗೆ ವಿತರಿಸಲಾಯ್ತು. ಈ ಮೂಲಕ ಮಾನವೀತೆಯನ್ನ ತೋರಲಾಗಿದೆ.

ಸಿಪಿಐ ಶಂಕರಗೌಡ ಬಸನಗೌಡ, ಸಂಜೀವ ಕಾಂಬಳೆ, ನಾಮದೇವ ಹಿರೇಕೊಡಿಯವರ ನೇತೃತ್ವದಲ್ಲಿ  ಹಂಚಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!