ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಇಳಿಮುಖ ಕಾಣ್ತಿದೆ. ಈ ಮೂಲಕ ಒಂದಿಷ್ಟು ನೆಮ್ಮದಿ ಮೂಡಿಸ್ತಿದೆ. ಆದ್ರೆ, ಜೂನ್ 30ರ ತನಕ ಲಾಕ್ ಡೌನ್ ಮುಂದುವರೆಸಿ ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ ಎನ್ನಲಾಗ್ತಿದೆ. ಇದ್ರಿಂದಾಗಿ ಜನರು ಏನಪ್ಪ ಮಾಡೋದು ಅಂತಿದ್ದಾರೆ. ಇದಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ರಾಜ್ಯದಲ್ಲಿ ಸೋಂಕು ಇಳಿಕೆ ಕಾಣಿಸುತ್ತಿದೆ. ಜೂನ್ 7ರ ತನಕ ಯಾವುದೇ ಬದಲಾವಣೆ ಇಲ್ಲ. ಪರಿಸ್ಥಿತಿ ನೋಡಿಕೊಂಡು ಲಾಕ್ ಡೌನ್ ವಿಸ್ತರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಬಹುಶಃ ಜೂನ್ 7ರ ನಂತರ ಲಾಕ್ ಡೌನ್ ಅವಶ್ಯಕ ಇರುವುದಿಲ್ಲ. ಆದ್ರೆ, ಸೋಂಕು ನಿಯಂತ್ರಣಕ್ಕೆ ಜನರು ಸಹಕರಿಸಬೇಕು ಅಂತಾ ಹೇಳಿದ್ದಾರೆ.