ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ವಿವೇಕಾನಂದ ಸರ್ಕಲ್ ನಿಂದ ಬಸವೇಶ್ವರ ಸರ್ಕಲ್ ವರೆಗಿನ ಡಿವೈಡರ್ ಗೆ ಗ್ರಿಲ್ ಅಳವಡಿಸುವ ಕೆಲಸ ನಡೆದಿತ್ತು. ಆರಂಭದಲ್ಲಿ ಒಂದಿಷ್ಟು ಕೆಲಸ ಮಾಡಿ ಕಾಂಕ್ರಿಟ್ ಹಾಕದೆ ಹಾಗೇ ಬಿಟ್ಟ ಪರಿಣಾಮ ಎರಡು ದಿನಗಳಲ್ಲಿ ಬಿದ್ದು ಹೋಗಿದ್ದವು. ಈ ಬಗ್ಗೆ ಪ್ರಜಾಸ್ತ್ರದಲ್ಲಿ ಸುದ್ದಿ ಮಾಡಲಾಗಿತ್ತು. ಇದೀಗ ಗ್ರೀಲ್ ಮರು ಅಳವಡಿಕೆ ಕೆಲಸ ನಡೆದಿದೆ.
ಪುರಸಭೆ ವತಿಯಿಂದ ಮತ್ತೊಮ್ಮೆ ಗ್ರಿಲ್ ಅಳವಡಿಸುವ ಕೆಲಸ ನಡೆದಿದೆ. ಈಗಲಾದರೂ ಸರಿಯಾಗಿ ಅಳವಡಿಸಬೇಕು ಅನ್ನೋದು ಸಾರ್ವಜನಿಕರ ಆಗ್ರಹ. ಸರಿಯಾಗಿ ಕೆಲಸ ಮಾಡಿದೆ ಒಂದೇ ಕಾಮಗಾರಿಗೆ ಪದೆಪದೆ ಸಾರ್ವಜನಿಕರ ತೆರಿಗೆ ಹಣ ಹಾಳು ಮಾಡುವುದು ಸರಿಯಲ್ಲವೆಂದು ಹೇಳುತ್ತಿದ್ದಾರೆ.
ಇನ್ನು ಡಿವೈಡರ್ ಮಧ್ಯೆ ಕಸ ಹಾಕುವವರ ವಿರುದ್ಧ ಪುರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ. ಸುತ್ತಮುತ್ತ ಶಾಲಾ, ಕಾಲೇಜುಗಳಿವೆ. ಸದಾ ಜನರ ಓಡಾಟ ಇರುತ್ತೆ. ಹೀಗಿದ್ದರೂ ಸುತ್ತಲಿನ ಜನರು, ವ್ಯಾಪಾರಿಗಳು, ಅಂಗಡಿಕಾರರು ಕಸ ತಂದು ಡಿವೈಡರ್ ಮಧ್ಯೆ ಸುರಿಯುತ್ತಿದ್ದಾರೆ. ಹೀಗಾಗಿ ಕಸ ಹಾಕುವವರ ವಿರುದ್ಧ ಪುರಸಭೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.