ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಬಾಲಿವುಡ್ ಅಂಗಳದ ಖ್ಯಾತ ಕಲಾನಿರ್ದೇಶಕ ನಿತಿನ್(57) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಎನ್ ಡಿ ಸ್ಟುಡಿಯೋದ ಮುಖ್ಯ ವೇದಿಕೆಯಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸಾಲದ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ರಾಯಗಡ್ ಜಿಲ್ಲೆಯ ಕರ್ಜಾತ್ ನಲ್ಲಿ ಎನ್ ಡಿ ಸ್ಟುಡಿಯೋ ನಿರ್ಮಿಸಿದ್ದಾರೆ. ನಿತಿನ್ 252 ಕೋಟಿಯ ತನಕ ಸಾಲ ಹೊಂದಿದ್ದರಂತೆ. ಈ ಸಂಬಂಧ ಕಳೆದ ವಾರ ಕೋರ್ಟ್ ನೋಟಿಸ್ ಬಂದಿದೆ. ಈ ಕುರಿತು ಶಾಸಕ ಮಹೇಶ್ ಬಾಲ್ದಿ ಸಹ ಮಾತನಾಡಿದ್ದು, ಸ್ಟುಡಿಯೋ ಸ್ಥಿತಿ ಚೆನ್ನಾಗಿಲ್ಲ. ಮಳೆಗಾಲದ ನಂತರ ಸುಧಾರಿಸಬಹುದು ಎಂದಿದ್ದರು. ಎರಡು ತಿಂಗಳ ಹಿಂದೆ ತಮ್ಮ ಆರ್ಥಿಕ ಸ್ಥಿತಿ ಬಗ್ಗೆ ಮಾತನಾಡಿದ್ದರು. ಸಾಲದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದಿದ್ದಾರೆ.
ನಿತಿನ್ ನಿಧನಕ್ಕೆ ಮುಖ್ಯಮಂತ್ರಿ ಏಕನಾಥ್ ಶಿಂದೆ, ಎನ್ ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಬಾಲಿವುಡ್ ಹಾಗೂ ಮರಾಠಿ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಲಗಾನ್, ಹಮ್ ದಿಲ್ ದೇ ಚುಕೆ ಸನಮ್, ಜೋಧಾ ಅಕ್ಬರ್, ಪಾಣಿಪತ್, ಒನ್ಸ್ ಅಪಾನ್ ಟೈಂ ಇನ್ ಮುಂಬೈ, ದೋಸ್ತಾನಾ, ಗಾಂಧಿ ಮೈ ಫಾದರ್, ಏಕ್ ಹಿಂದೂಸ್ತಾನಿ ಸೇರಿದಂತೆ ನೂರಾರು ಚಿತ್ರಗಳಿಗೆ ಕಲಾನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಹಲವು ಚಿತ್ರಗಳಿಗೆ ಪ್ರೊಡಕ್ಷನ್ ಡಿಸೈನರ್, ನಿರ್ದೇಶನ, ನಟನೆ, ನಿರ್ಮಾಣದಲ್ಲಿಯೂ ತೊಡಗಿಸಿಕೊಂಡಿದ್ದರು. ಅಸಹಜ ಸಾವು ಎಂದು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.