ಪ್ರಜಾಸ್ತ್ರ ಸುದ್ದಿ
ನವದೆಹಲಿ: ನೆಹರು ವಸ್ತು ಸಂಗ್ರಹಾಲಯ ಹೆಸರು ಬದಲಾವಣೆ ವಿಚಾರ ಸಂಬಂಧ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ನೆಹರು ಅವರು ತಮ್ಮ ಕೆಲಸದಿಂದ ಪ್ರಸಿದ್ಧಿ ಪಡೆದಿದ್ದಾರೆ ಹೊರತು ಬರೀ ಅವರ ಹೆಸರಿಗಾಗಿ ಅಲ್ಲ ಎನ್ನುವ ಮೂಲಕ ಕೇಂದ್ರದ ನಡೆಯನ್ನು ತೀಕ್ಷಣವಾಗಿ ಖಂಡಿಸಿದ್ದಾರೆ.
ಈಗಾಗ್ಲೇ ಕೇಂದ್ರದ ಈ ಕ್ರಮವನ್ನು ಕಾಂಗ್ರೆಸ್ ನಾಯಕರು ಖಂಡಿಸುತ್ತಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹಾಗೂ ಅವರ ಕೊಡುಗೆಯನ್ನು ಪ್ರಧಾನಿ ಮೋದಿಯವರು ಎಂದಿಗೂ ಕಸಿದುಕೊಳ್ಳಲು ಸಾಧ್ಯವಿಲ್ಲ. ನೆಹರು ಅವರ ಕೆಲಸಗಳು ಎಂದಿಗೂ ಜನರ ಮನಸ್ಸಿನಲ್ಲಿ ಇರುತ್ತವೆ ಅಂತಾ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.