ಸಾವಲ್ಲೂ ನಾಲ್ವರ ಪ್ರಾಣ ಉಳಿಸಿದ ಯುವತಿ

290

ಪ್ರಜಾಸ್ತ್ರ ಸುದ್ದಿ

ಹಾವೇರಿ: ಸೆಪ್ಟೆಂಬರ್ 9ರಂದು ಹೊನ್ನಳ್ಳಿ ತಾಲೂಕಿನ ಸೊರಟೂರು ಗ್ರಾಮದ ಹತ್ತಿರ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಕವನ ಮಳ್ಳಯ್ಯ ಹಿರೇಮಠ ಅನ್ನೋ ಯುವತಿಗೆ ಗಂಭೀರ ಗಾಯಗಳಾಗಿದ್ದವು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕವನ ಕೋಮಾ ಸ್ಥಿತಿಗೆ ಹೋಗಿದ್ದಳು. ಮಿದುಳು ನಿಷ್ಕ್ರೀಯಗೊಂಡ ವಿಷಯ ತಿಳಿದ ಪೋಷಕರ ಆಕ್ರಂದನ ಹೇಳತೀರದಾಗಿದೆ.

ಇಷ್ಟೊಂದು ನೋವಿನ ನಡುವೆಯೂ ಹೆತ್ತವರು, ಮಗಳ ಅಂಗಾಗಳನ್ನು ಇತರರಿಗೆ ದಾನ ಮಾಡುವ ನಿರ್ಧಾರ ಬಂದು, ಕಿಡ್ನಿ, ಲಿವರ್, ಹೃದಯ, ಕಣ್ಣುಗಳನ್ನು ದಾನ ಮಾಡಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಅಂಗಾಂಗ ದಾನ ಮಾಡಲಾಗಿದೆ. ಈ ಮೂಲಕ ಸಾವಿನಲ್ಲೂ ನಾಲ್ವರ ಪ್ರಾಣ ಉಳಿಸಲಾಗಿದೆ.

ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದ ಕವನ, ಶಿಕಾರಿಪುರದ ಗ್ರಾಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೆಪ್ಟೆಂಬರ್ 9ರಂದು ನಡೆದ ಅಪಘಾತದಿಂದ ಈ ದುರಂತ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!