ಪ್ರಜಾಸ್ತ್ರ ಸುದ್ದಿ
ದೇವರಹಿಪ್ಪರಗಿ: ಬೈಕ್ ಅಪಘಾತ ತಪ್ಪಿಸಲು ಹೋದಾಗ ಸರ್ಕಾರಿ ಬಸ್ ವೊಂದು ಜಮೀನಿಗೆ ನುಗ್ಗಿದ ಘಟನೆ ಪಟ್ಟಣದ ಜ್ಯೋತಿ ಶಾಲೆ ಎದುರು ನಡೆದಿದೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಿಲ್ಲ.
ದೇವರಹಿಪ್ಪರಗಿಯಿಂದ ತಾಳಿಕೋಟಿಗೆ ಬಸ್ ಹೋಗುತ್ತಿರುವ ವೇಳೆ ಈ ಅನಾಹುತ ಸಂಭವಿಸಿದೆ. ಬಸ್ ಚಾಲಕ ಶಂಕರಗೌಡ ಇಸ್ಲಾಪುರ ಅವರ ಸಮಯಪ್ರಜ್ಞೆಯಿಂದ 43 ಜನ ಪ್ರಯಾಣಿಕರು ಪಾರಾಗಿದ್ದಾರೆ. ದೇವರಹಿಪ್ಪರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.