ಗುಂಡಿಗೆ ಬಿದ್ದ ಬಸ್, 12 ಜನರ ಸಾವು

61

ಪ್ರಜಾಸ್ತ್ರ ಸುದ್ದಿ

ದುರ್ಗ್: ಖಾಸಗಿ ಬಸ್ ವೊಂದು ಗಣಿಗಾರಿಕೆ ಪ್ರದೇಶದ ಗುಂಡಿಗೆ ಬಿದ್ದ ಪರಿಣಾಮ ಬರೋಬ್ಬರಿ 12 ಪ್ರಯಾಣಿಕರು ಮೃತಪಟ್ಟ ದಾರುಣ ಘಟನೆ ಛತ್ತೀಸಗಡದ ದುರ್ಗ್ ಜಿಲ್ಲೆಯ ಖಾಪ್ರಿ ಹತ್ತಿರ ನಡೆದಿದೆ. ಮಂಗಳವಾರ ತಡರಾತ್ರಿ ಈ ಘಟನೆ ನಡೆದಿದ್ದು, 14 ಪ್ರಯಾಣಿಕರು ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ರಾಯಗಡದ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ, ಛತ್ತೀಸಗಡ್ ಸಿಎಂ ವಿಷ್ಣುದೇವ್ ಸಾಯಿ ಸಂತಾಪ ಸೂಚಿಸಿದ್ದಾರೆ.

ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದರು. ಬಸ್ಸಿನಲ್ಲಿ 30 ಜನರಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಎಸ್ಪಿ ಸೇರಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!