ಶ್ರೀಮಂತರ ಪರವಿರುವ ಮೋದಿ ಅವರದ್ದು ಪೊಳ್ಳು ಭರವಸೆ: ಪ್ರಿಯಾಂಕಾ

194

ಪ್ರಜಾಸ್ತ್ರ ಸುದ್ದಿ

ಶ್ರೀಮಂತರ ಪರವಿರುವ ಪ್ರಧಾನಿ ಮೋದಿ ಅವರದ್ದು ಪೊಳ್ಳು ಭರವಸೆ. ಕೇಂದ್ರಕ್ಕೆ ಬಡವರು, ಮಧ್ಯಮ ವರ್ಗದವರ ಬಗ್ಗೆ ಕಾಳಜಿ ಇಲ್ಲವೆಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕಿಡಿ ಕಾರಿದರು.

ಛತ್ತೀಸಗಡದ ನಗರಿಯಾ ನಿಕಾಯ್ ಈವಂ ಪಂಚಾಯಿತಿ ರಾಜ್ ಮಹಾಸಮ್ಮೇಳನದಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರೆ, ಪ್ರತಿಯೊಬ್ಬರ ಖಾತೆ 15 ಲಕ್ಷ ರೂಪಾಯಿ ಹಾಕುತ್ತೇನೆ ಎಂದರು ಏನಾಯಿತು? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಅನ್ನೋ ಗ್ಯಾರೆಂಟಿ ಏನಾಯಿತು? ಕೊಟ್ಟ ಭರವಸೆನ್ನು ಈಡೇರಿಸದೆ ಹೊಸ ಹೊಸ ಗ್ಯಾರೆಂಟಿಗಳನ್ನು ಘೋಷಣೆ ಮಾಡುತ್ತೆ ಎಂದು ವಾಗ್ದಾಳಿ ನಡೆಸಿದರು.

ಛತ್ತೀಸಗಡದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸುತ್ತೆ. ಬಡವರಿಗೆ 10 ಲಕ್ಷ ಮನೆಗಳನ್ನು ನಿರ್ಮಿಸಿಕೊಡುತ್ತೆ. ರೈತರು, ಮಹಿಳೆಯರು, ಯುವ ಜನತೆ ಪರವಾಗಿ ಕಾಂಗ್ರೆಸ್ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುತ್ತೆ ಎಂದು ಭರವಸೆ ನೀಡಿದರು.




Leave a Reply

Your email address will not be published. Required fields are marked *

error: Content is protected !!