ರಾಜಹಂಸ ಬಸ್-ಬುಲೆರೋ ಅಪಘಾತದಲ್ಲಿ ಓರ್ವ ಸಾವು

357

ಪ್ರಜಾಸ್ತ್ರ ಸುದ್ದಿ

ವಿಜಯಪುರ: ರಾಜಹಂಸ ಬಸ್ ಹಾಗೂ ಬುಲೆರೋ ಕಾರ್ ನಡುವೆ ಅಪಘಾತ ಸಂಭವಿಸಿ ಓರ್ವ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಹೊರ ಭಾಗದಲ್ಲಿ ಮಂಗಳವಾರ ನಸುಕಿನಜಾವ ನಡೆದಿದೆ. ಒರಿಸ್ಸಾ ಮೂಲದ ಸುಂದರಘಡ ಜಿಲ್ಲೆಯ ಸಂದೀಪ್ ನಾಯಕ್ ಮೃತ ದುರ್ದೈವಿ.

ಅಪಘಾತದಲ್ಲಿ ಗಾಯಗೊಂಡ ನಾಲ್ವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಬುಲೆರೋ ಕಾರ್ ಚಾಲಕನ ಅಜಾಗರೂಕತೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ. ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.




Leave a Reply

Your email address will not be published. Required fields are marked *

error: Content is protected !!