ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ದರ್ಶನ ಹೆಸರಿನಲ್ಲಿ 25 ಕೋಟಿ ರೂಪಾಯಿ ಲೋನ್ ಪಡೆದು ವಂಚಿಸಲು ಯತ್ನಿಸಿದ್ದ ಪ್ರಕರಣದ ಕಾವು ಇನ್ನು ಜೋರಾಗಿದೆ. ಇದರ ನಡುವೆ ನಿರ್ದೇಶಕ ಇಂದ್ರಜಿತ ಲಂಕೇಶ, ನಟ ದರ್ಶನ ಹಾಗೂ ಅವರ ಸ್ನೇಹಿತರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ದರ್ಶನ ಸ್ನೇಹಿತ ಸಂದೇಶ ನಾಗರಾಜ ಹೋಟೆಲ್ ಸಪ್ಲೈಯರ್ ಮೇಲೆ ಹಲ್ಲೆ ಮಾಡಲಾಗಿದೆ. ಆತನ ಕಣ್ಣೊಂದು ಮಂಜಾಗಿದೆ. ಇದನ್ನ ಸೆಟ್ ಲ್ಮೆಂಟ್ ಮೂಲಕ ಬಗೆಹರಿಸಲಾಗಿದೆ. ಮೈಸೂರು ಪೊಲೀಸ್ ಠಾಣೆಯಲ್ಲಿ ಸೆಟ್ ಲ್ಮೆಂಟ್ ಮಾಡುವ ಜಾಗಗಳಾ? ಮೈಸೂರು ಪೊಲೀಸರು ಕೈಗೆ ಬಳೆ ತೊಟ್ಟಿಕೊಂಡಿದ್ದಾರಾ ಎಂದು ಕಿಡಿ ಕಾರಿದ್ದಾರೆ. ಇನ್ನು ಅರುಣಾಕುಮಾರಿ ವಿಚಾರದಲ್ಲಿಯೂ ಸಾಕಷ್ಟು ವ್ಯವಹಾರ ನಡೆದಿದೆ. ಅದರ ತನಿಖೆಯಾಗ್ಲಿ ಎಂದಿರುವ ಇಂದ್ರಜಿತ್, ಸಂದೇಶ ನಾಗರಾಜ ಪ್ರಿನ್ಸ್ ಹೋಟೆಲ್ ಸಪ್ಲೈಯರ್ ದಲಿತನಾಗಿದ್ದಾನೆ. ಅರುಣಾಕುಮಾರಿ ದಲಿತ ಅನ್ನೋದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.
ಇನ್ನು ನಟ ದರ್ಶನ ಮಾತ್ನಾಡುವ ಭಾಷೆ ಸರಿಯಿಲ್ಲ. ತಲೆ ಸೀಳ್ತೀನಿ ಅನ್ನೋದು ಹೊಡೆಯೋದು ಇದು ಸಿನಿಮಾ ಅಲ್ಲ. ನಿಜ ಜೀವನ. ಇದು ನಿಲ್ಲಬೇಕು ಅಂದರೆ ಪೊಲೀಸರು ಸೂಕ್ತ ತನಿಖೆ ಮಾಡಬೇಕು. ನನ್ನ ಬಳಿಯೂ ಸಾಕ್ಷಿಯಿವೆ. ಈ ಬಗ್ಗೆ ಗೃಹ ಸಚಿವರನ್ನ ಭೇಟಿಯಾಗಿ ಮನವಿ ಸಲ್ಲಿಸಿದ್ದೇನೆ ಎಂದು ಹೇಳುವ ಮೂಲಕ ನಟ ದರ್ಶನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.