ಬಿಜೆಪಿ ಓಬಿಸಿ ಸಿಂದಗಿ ಮಂಡಲ ಅಧ್ಯಕ್ಷನ ಮೇಲೆ ಮಾರಣಾಂತಿಕ ಹಲ್ಲೆ

1084

ಪ್ರಜಾಸ್ತ್ರ ಸುದ್ದಿ

ಸಿಂದಗಿ: ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬಿಜೆಪಿ ಓಬಿಸಿ ಮಂಡಲದ ಅಧ್ಯಕ್ಷನ ಮೇಲೆ ತಲವಾರದಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಇದೀಗ ವಿಜಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

28 ವರ್ಷದ ರವಿ ನಾಯ್ಕೋಡಿ ಎಂಬುವರ ಮೇಲೆ, ಆಲಮೇಲೆ ರಸ್ತೆಯ ಅರ್ಪಿತಾ ಡಾಭಾ ಹತ್ತಿರ ತಲವಾರದಿಂದ ಸೋಮವಾರ ಸಂಜೆ ಸುಮಾರು ಆರೇಳು ಜನರಿಂದ ಹಲ್ಲೆ ಮಾಡಲಾಗಿದೆ.

ಬಬಲೇಶ್ವರ ಗ್ರಾಮದ ಅನಿಲ ಜಟ್ಟೆಪ್ಪ ಬರಗಾಲ ಹಾಗೂ ರಾಂಪೂರ ಪಿ.ಎ ಗ್ರಾಮದ ಯುವರಾಜ ಸೇರಿದಂತೆ ಗುರುತು ಪತ್ತೆಯಾಗದ ಇತರ ನಾಲ್ಕೈದು ಜನರ ವಿರುದ್ಧ ಸಿಂದಗಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಹಲ್ಲೆಗೆ ಕಾರಣ ತಿಳಿದು ಬಂದಿಲ್ಲ.




Leave a Reply

Your email address will not be published. Required fields are marked *

error: Content is protected !!