ಪ್ರಜಾಸ್ತ್ರ ಸುದ್ದಿ
ಚೆನ್ನೈ: ತಮಿಳುನಾಡಿನ ಶಾಸಕರೊಬ್ಬರ ಪ್ರೇಮ ವಿವಾಹ ಇದೀಗ ವಿವಾದಕ್ಕೆ ಕಾರಣವಾಗಿದೆ. ಹೀಗಾಗಿ ತಮಿಳು ರಾಜಕೀಯ ವಲಯದಲ್ಲಿ ಭರ್ಜರಿ ಚರ್ಚೆ ನಡೆಯುತ್ತಿದೆ.
ಕಲಕುರಚಿ ಕ್ಷೇತ್ರದ ಶಾಸಕ ಪ್ರಭು(35) 19 ವರ್ಷದ ಯುವತಿಯನ್ನ ಪ್ರೀತಿಸಿ ಮದ್ವೆಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಯುವತಿಯ ತಂದೆ ಸ್ವಾಮಿನಾಥನ ವಿರೋಧ ವ್ಯಕ್ತಪಡಿಸಿದ್ದು ಆತ್ಮಹತ್ಯೆಯ ಬೆದರಿಕೆ ಹಾಕಿದ್ದಾರೆ ಎನ್ನಲಾಗ್ತಿದೆ.
ಬಿಟೆಕ್ ಪದವೀಧರ ಆಗಿರುವ ಶಾಸಕ ಪ್ರಭು ಹಾಗೂ ಸೌಂದರ್ಯ ಮದುವೆ ಅಕ್ಟೋಬರ್ 5 ಸೋಮವಾರ ನಡೆದಿದೆ. ಯುವತಿಯ ಕುಟುಂಬಸ್ಥರಿಗೆ ಪ್ರಭು ಪರಿಚಯಸ್ಥ ಎನ್ನಲಾಗ್ತಿದೆ. ಆದ್ರೆ, ಜಾತಿ, ವಯಸ್ಸಿನ ಕಾರಣಕ್ಕೆ ಮದ್ವೆಗೆ ವಿರೋಧ ವ್ಯಕ್ತವಾಗಿದೆಯಂತೆ.