ಪ್ರಜಾಸ್ತ್ರ ಸುದ್ದಿ
ಚಿತ್ರದುರ್ಗ: ಮದುವೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿ ಇನ್ನೇನು ವರ ತಾಳಿ ಕಟ್ಟಬೇಕು ಅಷ್ಟರಲ್ಲಿ ವಧು ಕೈ ಅಡ್ಡ ತಂದು ಮದುವೆ ಬೇಡ ಎಂದಿರುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ಈ ರೀತಿ ನಡೆದ ಘಟನೆಯ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಜಿಲ್ಲೆಯ ಚಿಕ್ಕಬ್ಯಾಲದಕೆರೆಯಲ್ಲಿ ನಡೆಯುತ್ತಿದ್ದ ಮದುವೆ ಮುರಿದು ಬಿದ್ದಿದೆ. ವರ ತಾಳಿ ಕಟ್ಟಲು ಮುಂದಾಗುತ್ತಿದ್ದಂತೆ ವಧು, ಮದುವೆ ಇಷ್ಟವಿಲ್ಲ ಎಂದು ಹಠ ಹಿಡಿದಿದ್ದಾಳೆ. ಕುಟುಂಬಸ್ಥರು ಏನೇ ಹೇಳಿದರೂ ಹುಡುಗಿ ಕೇಳಿಯೇ ಇಲ್ಲ. ಹೀಗಾಗಿ ಕೊನೆಗೆ ಮದುವೆ ಮುರಿದು ಬಿದ್ದಿದೆ.
ವಧು ಕೊನೆ ಕ್ಷಣದಲ್ಲಿ ಮದುವೆ ನಿರಾಕರಿಸಿದ್ದು ಯಾಕೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಒಂದು ವೇಳೆ ವರ ಈ ರೀತಿ ನಡೆದುಕೊಂಡಿದ್ದಾರೆ ಏನೆಲ್ಲ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿದ್ದರು. ಈಗ ವಧು ಈ ರೀತಿ ನಡೆದುಕೊಂಡಿದ್ದರಿಂದ ಎರಡು ಕುಟುಂಬಸ್ಥರ ಗೌರವದ ಜೊತೆಗೆ ಆರ್ಥಿಕ ನಷ್ಟ ಸಹ ಆಗಿದೆ ಎಂದು ಕಿಡಿ ಕಾರುತ್ತಿದ್ದಾರೆ.