7 ಜನ ಶಿಕ್ಷಕರ ಮನೆಯಲ್ಲಿ ಸರಣಿ ಕಳ್ಳತನ..

562

ವಿಜಯಪುರ: ಸ್ಕೂಲ್ ಗೆ ರಜೆ ಇದ್ದ ಕಾರಣ, ಊರಿಗೆ ಹೋಗಿದ್ದ ಶಿಕ್ಷಕರೊಬ್ಬರ ಮನೆಯಲ್ಲಿ ಕಳ್ಳತನವಾಗಿದೆ. ವಿಜಯಪುರ ತಾಲೂಕಿನ ಕನ್ನೂರಿನಲ್ಲಿ ಸರಣಿಗಳ್ಳತನ ನಡೆದಿದ್ದು, ಏಳು ಜನ ಶಿಕ್ಷಕರ ಮನೆಗಳನ್ನ ಕಳ್ಳತನ ಮಾಡಲಾಗಿದೆ.

ರಜೆಯಿಂದಾಗಿ ಕೆಲವರು ಊರಿಗೆ ಹೋಗಿದ್ರು. ಕೆಲವರು ಮನೆಯ ಮಾಳಿಗೆ ಮೇಲೆ ಮಲಗಿದ್ದರು. ಈ ವೇಳೆ ಪ್ಲಾನ್ ಮಾಡಿ ಮನೆಗೆ ನುಗಿದ್ದ ನಾಲ್ವರು ಚೋರರು, 6 ಲಕ್ಷ ಮೌಲ್ಯದ ಚಿನಾಭರಣ ಕದ್ದು ಪರಾರಿಯಾಗಿದ್ದಾರೆ. ಅಲ್ದೇ ಕನ್ನೂರು ಗ್ರಾಮದೇವತೆಯಾದ ನಾಡದೇವಿ ದೇವಸ್ಥಾನದಲ್ಲಿಯೂ ಕಳ್ಳತನ ಮಾಡಿದ್ದು, ಕಿರೀಟ, ಖಡ್ಗ, ತ್ರಿಶೂಲ ಕದ್ದಿದ್ದಾರೆ.

ಏಳು ಮನೆಗಳು, ದೇವಸ್ಥಾನ ಸೇರಿ 6 ಲಕ್ಷ ಮೌಲ್ಯದ 400 ಗ್ರಾಮ ಚಿನ್ನಾಭರಣ ಹಾಗೂ ಎರಡು ಲಕ್ಷ ರೂಪಾಯಿ ದೋಚಿದ್ದಾರೆ. ಇಷ್ಟೆಲ್ಲ ಕದ್ದ ಖದೀಮರು ವೈನ್ ಶಾಪ್ ಗೆ ನುಗ್ಗಿ ವೈನ್ ಸಹ ಕದ್ದು ಕುಡಿದು ಅಲ್ಲಿಂದ ಪರಾರಿಯಾಗಿದ್ದಾರೆ. ಇಷ್ಟೆಲ್ಲ ನಡೆದಿದ್ದು ಮೇ 25ರಂದು. ಸಿಸಿಟಿವಿ ದೃಶ್ಯಗಳು ಸಿಕ್ಕ ನಂತರ ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ವಿಜಯಪುರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!