Search

ರೈತರ ಹೋರಾಟಕ್ಕೆ ಕೆನಡಾ, ಬ್ರಿಟನ್ ಬೆಂಬಲ..ಮೋದಿ ಮೌನ..!

262

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಕೃಷಿ ಮಸೂದೆ ವಿರೋಧಿಸಿ ರೈತ ಸಂಘಟನೆಗಳಿಂದ ದೆಹಲಿಯಲ್ಲಿ ಬೃಹತ್ ಪ್ರತಿಭಟನೆಯನ್ನ ನಡೆಸಲಾಗ್ತಿದೆ. ಕಳೆದೊಂದು ವಾರದಿಂದಲೂ ಅತ್ಯಂತ ಚಳಿಯಿಂದ ಕೂಡಿರುವ ದೆಹಲಿಯ ಹೊರ ಭಾಗದಲ್ಲಿ ಹೋರಾಟ ಮಾಡಿಕೊಂಡು ಬರ್ತಿದ್ದಾರೆ. ಇದಕ್ಕೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಬೆಂಬಲ ಸೂಚಿಸಿದ್ದಾರೆ.

ವಿಶ್ವದಲ್ಲಿ ಎಲ್ಲಿಯೇ ಶಾಂತಿಯುತ ಹೋರಾಟ ನಡೆಸಿದ್ರೂ ನಮ್ಮ ಬೆಂಬಲವಿದೆ ಎಂದು ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಕೋವಿಡ್ 19 ಸಭೆಯನ್ನ ಭಾರತ ಬಹಿಷ್ಕರಿಸುತ್ತೆ ಅನ್ನೋ ಎಚ್ಚರಿಕೆ ನಡುವೆಯೂ ಟ್ರೂಡೊ ರೈತರಿಗೆ ಬೆಂಬಲ ನೀಡಿದ್ದಾರೆ.

ಇನ್ನು ಬ್ರಿಟಿನ್ ನಲ್ಲಿಯೂ ಸಿಖ್ ಹೋರಾಟಗಾರರಿಗೆ ಬೆಂಬಲ ವ್ಯಕ್ತವಾಗಿದೆ. ಭಾರತೀಯ ಮೂಲದ 36 ಮಂದಿ ಸಂಸದರು, ವಿದೇಶಾಂಗ ಸಚಿವ ಡೊಮಿನಿಕ್ ರಾಬ್ ಅವರಿಗೆ ಪತ್ರ ಬರೆದಿದ್ದಾರೆ. ಭಾರತದಲ್ಲಿನ ಪ್ರತಿಭಟನೆಯಿಂದ ಬ್ರಿಟಿನ್ ನಲ್ಲಿರುವ ಸಿಖ್ ರ ಮೇಲೆ ಆಗ್ತಿರುವ ಪರಿಣಾಮದ ಬಗ್ಗೆ ಭಾರತದ ವಿದೇಶಾಂಗ ಸಚಿವ ಜೈಶಂಕರ ಅವರೊಂದಿಗೆ ಮಾತುಕತೆ ನಡೆಸಬೇಕೆಂದು ಪತ್ರ ಬರೆದಿದ್ದಾರೆ.

ವಿದೇಶದಲ್ಲಿರುವವರು ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದ್ರೆ, ಭಾರತದ ಪ್ರಧಾನಿ ಮೋದಿ ಈ ಬಗ್ಗೆ ಒಂದು ಮಾತು ಸಹ ಆಡ್ತಿಲ್ಲ. ಎಲ್ಲದಕ್ಕೂ ಟ್ವೀಟ್ ಮಾಡುವ ಪಿಎಂ, ರೈತರ ಕುರಿತು ಒಂದಿಷ್ಟು ಬರೆದು ಅವರ ಸಾಹಯಕ್ಕೆ ಬರುವ ಮಾತು ಆಡ್ತಿಲ್ಲವೆಂದು ವಿಪಕ್ಷಗಳು ವಾಗ್ದಾಳಿ ನಡೆಸಿವೆ.




Leave a Reply

Your email address will not be published. Required fields are marked *

error: Content is protected !!