ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಕಾಂಗ್ರೆಸ್ ಜೊತೆ ಹೋಗಿ ನಾನು ತಪ್ಪು ಮಾಡಿದೆ. ತಂದೆ ಮಾತಿಗೆ ಮರುಳಾದೆ. ಕಾಂಗ್ರೆಸ್ ನಿಂದ ನಾನು ಸರ್ವನಾಶವಾದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಅವರ ಮಾತಿನಲ್ಲಿ ಸತ್ಯವಿಲ್ಲ. ಅವರನ್ನ ಸಿಎಂ ಮಾಡಿದ್ದು ತಪ್ಪಾ? ಕಾಂಗ್ರೆಸ್ ಸೀಟ್ ಹೆಚ್ಚಿಗೆ ಇದ್ರೂ, ಸೀಟು ಕಮ್ಮಿ ಇರುವ ಅವರನ್ನ ಸಿಎಂ ಮಾಡಿದ್ದು ತಪ್ಪಾ ಆಯ್ತಾ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರು, ಕುಮಾರಸ್ವಾಮಿ ಯಾವಾಗ್ಲೂ ಕಣ್ಣೀರು ಹಾಕ್ತಾರೆ. ಸಂತೋಷಕ್ಕೂ ಕಣ್ಣೀರು ಹಾಕ್ತಾರೆ. ಕೆಟ್ಟದಕ್ಕೂ ಹಾಕ್ತಾರೆ. ಓಲೈಕೆಗೂ ಕಣ್ಣೀರು ಹಾಕ್ತಾರೆ. ಇವರ ಕಣ್ಣೀರಿಗೆ ಬೆಲೆ ಇಲ್ಲವೆಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಅವರನ್ನ ಸಿಎಂ ಮಾಡಿದ್ದಕ್ಕೆ ಅನುದಾನ ನೀಡಿದ್ದಾರೆ. ನಮ್ಮ ಶಾಸಕರ ಸಹಕಾರದಿಂದ ಸಿಎಂ ಆಗಿದ್ದಾರೆ. ಅದೇನು ದೊಡ್ಡಸ್ತಿಕೆಗೆ ಹೇಳ್ತಾರೆ ಎಂದು ಕುಟುಕಿದ್ದಾರೆ.