ಮೈಸೂರು: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಕಣ ರಂಗೇರಿದೆ. ಅಬ್ಬರದ ಪ್ರಚಾರ ಸಹ ನಡೆದಿದೆ. ಮೈತ್ರಿ ಸರ್ಕಾರ ಪತನವಾದ್ಮೇಲೆ ಕಾಲೆಳೆದುಕೊಂಡಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಕೆಲವು ಕಡೆ ಒಂದಾಗಿವೆಯಂತೆ. ಈ ಬಗ್ಗೆ ಸ್ವತಃ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತ್ನಾಡಿದ ಅವರು, ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾದ ಅನರ್ಹ ಶಾಸಕರನ್ನ ಸೋಲಿಸುವುದು ಕಾಂಗ್ರೆಸ್ ಹಾಗೂ ಜೆಡಿಎಸ್ ಉದ್ದೇಶ. ಇದ್ರಿಂದಾಗಿ ಕೆಲವು ಕಡೆ ಕಾಂಗ್ರೆಸ್ ಗೆ ಜೆಡಿಎಸ್ ಬೆಂಬಲ ನೀಡ್ತಿದೆ ಎಂದು ಹೇಳಿದ್ದಾರೆ. ಇದು ಅನರ್ಹರಿಗೆ ಟೆನ್ಷನ್ ಕೊಡುವುದಾಗಿದೆ.
ನಮ್ಮ ಉದ್ದೇಶ ಹಾಗೂ ಕುಮಾರಸ್ವಾಮಿ ಅವರ ಉದ್ದೇಶ ಒಂದೆಯಾಗಿದೆ. ಪಕ್ಷಾಂತರಿಗಳನ್ನ ಎಲೆಕ್ಷನ್ ನಲ್ಲಿ ಸೋಲಿಸುವುದು. ಹೀಗಾಗಿ ಕೆಲವು ಕ್ಷೇತ್ರಗಳಲ್ಲಿ ಜೆಡಿಎಸ್ ಬೆಂಬಲ ನೀಡಲಿದೆ ಅಂತಾ ಹೇಳುವ ಮೂಲಕ ಹೊಸ ದಾಳ ಉರುಳಿಸಿದ್ದಾರೆ.