ಗೋಕಾಕ: ಕಾಂಗ್ರೆಸ್ ನಿಂದ ದೂರವಾಗಿ ಬಿಜೆಪಿ ಪಾಳೆಯದಲ್ಲಿ ಸೇರಿಕೊಂಡು, ಗೋಕಾಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಜಾರಕಿಹೊಳಿ, ಕಾಂಗ್ರೆಸ್ ಗೆ ವೋಟ್ ಹಾಕಿ ಅಂತಾ ಕೇಳಿಕೊಂಡಿದ್ದಾರೆ.
ಅಬ್ಬರದ ಪ್ರಚಾರ ನಡೆಸಿರುವ ರಮೇಶ ಜಾರಕಿಹೊಳಿ ಉಪ್ಪಾರಟ್ಟಿಯಲ್ಲಿ ಮತಯಾಚನೆ ನಡೆಸಿದ್ರು. ಈ ವೇಳೆ ಕಾಂಗ್ರೆಸ್ ಗೆ ಮತ ನೀಡಬೇಕು ಅಂತಾ ಕೇಳಿಕೊಂಡ್ರು. ಬಳಿಕ ನಕ್ಕ ಅವರು, ಕಾಂಗ್ರೆಸ್ ನಲ್ಲಿದ್ದು ಮಾನಸಿಕವಾಗಿ ಹೇಳಿದ್ದೇನೆ. ಎಲ್ಲರೂ ಬಿಜೆಪಿಗೆ ಮತ ಹಾಕಿ ಎಂದು ಮತ್ತೊಮ್ಮೆ ಕೇಳಿಕೊಂಡರು.
ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಗೋಕಾಕ ಸಹ ಒಂದು. ಜಾರಕಿಹೊಳಿ ಬ್ರದರ್ಸ್ ನಡುವೆ ನೇರಾ ನೇರಾ ಫೈಟ್ ನಡೆಯುತ್ತಿದೆ. ರಮೇಶ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್ ನಿಂದ ಲಖನ್ ಹಾಗೂ ಸತೀಶ ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ಮತಗಳನ್ನ ಇಬ್ಭಾಗ ಮಾಡುವ ಭರ್ಜರಿ ಪ್ಲಾನ್ ಮಾಡಿದ್ದಾರೆ.