ಮಂಡ್ಯ: ಕೆ.ಆರ್ ಪೇಟೆ ವಿಧಾನಸಭಾ ಉಪ ಚುನಾವಣೆ ಸಹ ಸಾಕಷ್ಟು ಕುತೂಹಲದಿಂದ ಕೂಡಿದೆ. ಜೆಡಿಎಸ್ ಭದ್ರಕೋಟೆಯನ್ನ ಒಬ್ಬೊಬ್ಬರಾಗಿ ಛಿದ್ರ ಮಾಡ್ತಿದ್ದಾರೆ. ಬಗ್ಗೆ ಮಾತ್ನಾಡಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಸಂಸದೆ ಸುಮಲತಾ ಅಂಬರೀಶ ಅವರು ಬಿಜೆಪಿಗೆ ಸಪೋರ್ಟ್ ಮಾಡ್ತಾರೆ ಅನ್ನೋ ವಿಶ್ವಾಸವಿದೆ ಅಂತಾ ಹೇಳಿದ್ದಾರೆ
ಪಕ್ಷದ ಪ್ರಮುಖ ನಾಯಕರು ಸುಮಲತಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಹಾಗೂ ಗೃಹ ಸಚಿವ ಅಮಿತ ಶಾ ಅವರ ಬೆಂಬಲವನ್ನ ಕೋರಿದ್ದಾರೆ. ಹೀಗಾಗಿ ಬೆಂಬಲಿಸುವ ಕುರಿತು ಅವರಿಗೆ ಚೆನ್ನಾಗಿ ಗೊತ್ತಿದೆ ಅಂತಾ ಹೇಳಿದ್ದಾರೆ. ನಾರಾಯಣಗೌಡ ಕೆ.ಆರ್ ಪೇಟೆ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಈ ಹಿಂದೆ ಅವರು ಜೆಡಿಎಸ್ ಶಾಸಕರಾಗಿದ್ರು.