ಪ್ರಜಾಸ್ತ್ರ ಸುದ್ದಿ
ರಾಯಚೂರು: ಬಿಜೆಪಿಯೊಂದಿಗೆ ಮುನಿಸಿಕೊಂಡಿರುವ ಮಾಜಿ ಸಚಿವ ಜನಾರ್ಧನ್ ರೆಡ್ಡಿ ಹೊಸ ಪಕ್ಷ ಸ್ಥಾಪನೆ ವಿಚಾರ ಸಾಕಷ್ಟು ಚರ್ಚೆಗೆ ಬಂದಿದೆ. ಈ ಕುರಿತು ಮಾತನಾಡಿರುವ ಸ್ನೇಹಿತ, ಸಚಿವ ಶ್ರೀರಾಮುಲು ಅವರು, ಜನಾರ್ಧನ್ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಕುರಿತು ನನ್ನ ಗಮನಕ್ಕೆ ಬಂದಿದೆ. ಹಿರಿಯರಿಗೆ ಏನನ್ನು ತಿಳಿಸಬೇಕು ಅದನ್ನು ತಿಳಿಸಿದ್ದೇನೆ ಎಂದಿದ್ದಾರೆ.
ಮಾನ್ವಿಯಲ್ಲಿ ಮಾತನಾಡಿದ ಅವರು, ಸಮಯದ ಕಾರಣದಿಂದ ರೆಡ್ಡಿಗೆ ಭೇಟಿಯಾಗಲು ಆಗಿಲ್ಲ. ಅವರು ನನಗೆ ಅತ್ಯಂತ ಆತ್ಮೀಯ ಸ್ನೇಹಿತ. ಏನು ನೋವಾಗಿದೆ ಅನ್ನೋದು ಕೇಳುತ್ತೇನೆ. ಪಕ್ಷ ಅಂತಾ ಬಂದಾಗ ಭಿನ್ನಾಭಿಪ್ರಾಯ ಸಹಜ. ಸ್ನೇಹ ಹಾಗೂ ಪಕ್ಷ ಎರಡನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.
ಸಚಿವ ಶ್ರೀರಾಮುಲು ಅವರ ಮಾತುಗಳು, ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡುವುದು ಪಕ್ಕಾ ಎನ್ನುವಂತಾಗಿದೆ. ಒಂದು ವೇಳೆ ಪ್ರಾದೇಶಿಕ ಪಕ್ಷ ರಚನೆ ಮಾಡಿದರೆ ಏನೆಲ್ಲ ರಾಜಕೀಯ ಬೆಳವಣಿಗೆಗಳು ಆಗುತ್ತವೆ. ಜನಾರ್ಧನ್ ರೆಡ್ಡಿ ಅವರನ್ನು ನಂಬಿ ಯಾರೆಲ್ಲ ಹೋಗುತ್ತಾರೆ ಅನ್ನೋ ಕುತೂಹಲವಿದೆ.