ಪ್ರಜಾಸ್ತ್ರ ಸಿನಿಮಾ ಸುದ್ದಿ
ಮೈಸೂರು: ಕನ್ನಡ ಚಿತ್ರರಂಗದ ಸಾಹಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಜನವರಿ 29ರಂದು ಲೋಕಾರ್ಪಣೆಗೊಳ್ಳುತ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಅಭಿಮಾನಿಗಳು ಅಂದು ದೊಡ್ಡ ಜಾತ್ರೆ ನಡೆಸಲು ಸಿದ್ಧರಾಗಿದ್ದಾರೆ.
ಬರೋಬ್ಬರಿ 13 ವರ್ಷಗಳ ಬಳಿಕ ಸ್ಮಾರಕ ನಿರ್ಮಾಣವಾಗಿದೆ. ಹೀಗಾಗಿ ಮೈಸೂರಿನಲ್ಲಿ ವಿಷ್ಣು ದಾದಾ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ವಿಷ್ಣು ಸೇನಾ ಸಮಿತಿ ಸೇರಿ ಅವರ ಅಭಿಮಾನಿಗಳ ಸಂಘಗಳಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 300 ಜಾಥಾ ವಾಹನ, 100 ಕಟೌಟ್, ಲಕ್ಷ ದೀಪೋತ್ಸವ, ಕುಂಭಮೇಳ ನಡೆಸಲಾಗುತ್ತಿದೆ.
ವಿಷ್ಣು ಸೇನಾ ಸಮಿತಿಯ ವಿರಕಪುತ್ರ ಶ್ರೀನಿವಾಸ್ ನೇತೃತ್ವದಲ್ಲಿ ಜಾತ್ರೆ ನಡೆಸಲಾಗುತ್ತಿದೆ. 3 ಕಿಲೋ ಮೀಟರ್ ಜಾಥಾ ನಡೆಯಲಿದ್ದು, ವಿವಿಧ ಕಲಾ ತಂಡಗಳು ಇದರಲ್ಲಿ ಭಾಗವಹಿಸಲಿವೆ. ಈ ಮೂಲಕ ಅಂದು ವಿಷ್ಣು ಅಭಿಮಾನಿಗಳ ಸಂಭ್ರಮ ಸಡಗರ ಮುಗಿಲು ಮುಟ್ಟಿರುತ್ತದೆ.