ಪ್ರಜಾಸ್ತ್ರ ಸಿನಿಮಾ ಡೆಸ್ಕ್
ನಟ ಪ್ರಭಾಸ್, ನಟಿ ಕೃತಿ ಸನೂನ್, ನಟ ಸೈಫ್ ಅಲಿಖಾನ್ ಸೇರಿದಂತೆ ಹಲವರು ನಟಿಸಿರುವ ಆದಿಪುರುಷ್ ಚಿತ್ರದ ವಿರುದ್ಧ ದೂರು ದಾಖಲಾಗಿದ್ದು, ಜುಲೈ 27ರಂದು ಚಿತ್ರ ತಂಡ ಕೋರ್ಟಿಗೆ ಹಾಜರಾಗಬೇಕೆಂದು ಅಲಹಾಬಾದ್ ಹೈಕೋರ್ಟ್ ತಿಳಿಸಿದೆ.
ಚಿತ್ರವು ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟು ಮಾಡಿದೆ. ಸಿನಿಮಾ ಬ್ಯಾನ್ ಮಾಡಬೇಕೆಂದು ಕುಲದೀಪ್ ತಿವಾರಿ, ನವೀನ್ ಧವನ್ ಎಂಬುವರು ಪ್ರತ್ಯೇಕ ದೂರು ದಾಖಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, ನಿರ್ದೇಶಕ ಓಂ ರಾವತ್, ನಿರ್ಮಾಪಕ ಭೂಷಣ್ ಕುಮಾರ್, ಸಂಭಾಷಣೆಕಾರ ಮನೋಜ್ ಮುಂತಾಶಿರ್ ಅವರು ಕೋರ್ಟಿಗೆ ಹಾಜರಾಗಲು ಸೂಚನೆ ನೀಡಿದೆ.
ಚಿತ್ರದಲ್ಲಿ ನಟ ಪ್ರಭಾಸ್ ರಾಮನ ಪಾತ್ರ, ಕೃತಿ ಸನೋನ್ ಸೀತಾ ಪಾತ್ರ, ಸೈಫ್ ಅಲಿಖಾನ್ ರಾವಣನ ಪಾತ್ರ ಸಿಕ್ಕಾಪಟ್ಟೆ ಟ್ರೋಲ್ ಗೆ ಒಳಗಾಗಿವೆ. ಪೌರಾಣಿಕ ಕಥೆಯನ್ನು 500 ಕೋಟಿ ಬಜೆಟ್ ನಲ್ಲಿ ಮಾಡಲು ಹೋಗಿ ಅತ್ಯಂತ ಕೆಟ್ಟದಾಗಿ ತೋರಿಸಲಾಗಿದೆ. ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಅಂತಾ ಟೀಕೆಗಳು ಕೇಳಿ ಬಂದವು. ನೇಪಾಳದಲ್ಲಿ ಸಿನಿಮಾ ಬ್ಯಾನ್ ಎಚ್ಚರಿಕೆ ಸಹ ನೀಡಲಾಯಿತು.