ಅಗ್ನಿಸಾಕ್ಷಿ ಧಾರವಾಹಿ ಖ್ಯಾತಿಯ ನಟ ವಿಜಯ್ ಸೂರ್ಯ, ಸಿದ್ಧಾರ್ಥ್ ಪಾತ್ರದಿಂದ ಹೊರ ಬಂದಿದ್ದಾರೆ. ಈ ಧಾರವಾಹಿಗಾಗಿ ನಟ ವಿಜಯ್ ಸೂರ್ಯ್ ಐದು ವರ್ಷ ಒಪ್ಪಂದ ಮಾಡಿಕೊಂಡಿದ್ದು, ಅದೀಗ ಮುಗಿದಿದೆ. ಹೀಗಾಗಿ ಈ ಟೀಂನಿಂದ ಅವರು ಆಚೆ ಬಂದಿದ್ದಾರೆ.
ಅಗ್ನಿಸಾಕ್ಷಿ ಸೀರಿಯಲ್ ಶುರುವಾಗಿ ಐದು ವರ್ಷಗಳು ಆಗಿವೆ. ನಟ ವಿಜಯ್ ಸೂರ್ಯನಿಗೆ ಇತ್ತೀಚೆಗಷ್ಟೆ ಮದುವೆಯಾಗಿದ್ದು, ಕುಟುಂಬದವರ ಜೊತೆ ಕಾಲ ಕಳೆಯಲು ಒಂದಿಷ್ಟು ಸಮಯಬೇಕಿದೆ. ಹೀಗಾಗಿ ಒಪ್ಪಂದದ ಪ್ರಕಾರ ಐದು ವರ್ಷ ಪೂರ್ಣಗೊಳಿಸಿರುವುದ್ರಿಂದ ಹೊರ ಬರಲು ಸೂಕ್ತ ಟೈಂ ಎಂದ್ಕೊಂಡು ಆಚೆ ಬಂದಿದ್ದಾರೆ. ಅಲ್ದೇ ಅವರು ಒಂದಿಷ್ಟು ಸಿನಿಮಾಗಳಲ್ಲಿ ಬ್ಯುಸಿ ಇದ್ದು, ಲಕ್ನೋ ಟು ಮುಂಬೈ ಸಿನಿಮಾ ಶೂಟಿಂಗ್ ನಲ್ಲಿ ಸಹ ಇದ್ದಾರೆ.
ಈಗಾಗ್ಲೇ ಸೀರಿಯಲ್ ನಲ್ಲಿ ಸಿದ್ಧಾರ್ಥ್ ಪಾತ್ರಧಾರಿ ನಟ ವಿಜಯ್ ಆಸ್ಟ್ರೇಲಿಯಾಗೆ ಹೊರಡಲು ರೆಡಿಯಾಗಿದ್ದಾರೆ. ಅಲ್ಲಿಗೆ ಈ ಪಾತ್ರ ಮುಕ್ತಾಯವಾಗ್ತಿದ್ದು, ಆ ಜಾಗಕ್ಕೆ ಯಾರು ಬರ್ತಾರೆ ಅನ್ನೋ ಕುತೂಹಲ ಸೀರಿಯಲ್ ನೋಡುಗರಲ್ಲಿ ಮೂಡಿದೆ.