ಕೃಷಿ ಕಾಯ್ದೆ ಬದಲಾವಣೆ ಮಾಡಲು ಸಿದ್ಧ

242

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕೇಂದ್ರ ಮೂರು ಕೃಷಿ ಕಾಯ್ದೆ ವಿರುದ್ಧ ದೇಶವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ನಿರಂತರವಾಗಿ ಕೇಂದ್ರ ಸರ್ಕಾರ ಹಾಗೂ ರೈತರ ನಡುವೆ ಹೋರಾಟ ಮುಂದುವರೆದಿದೆ. ಈ ಬಗ್ಗೆ ಮೊದಲ ಬಾರಿಗೆ ಸಂಸತ್ ನಲ್ಲಿ ಮೌನ ಮುರಿದು ಪ್ರಧಾನಿ ಮೋದಿ ಮಾತ್ನಾಡಿದ್ದಾರೆ.

ಕೃಷಿ ಕಾಯ್ದೆಗಳನ್ನ ರೈತರ ಅನುಕೂಲಕ್ಕೆ ತಂದಿದ್ದೇವೆ. ಇದ್ರಿಂದ ತೊಂದರೆಯಾಗುವುದಿಲ್ಲ. ಎಪಿಎಂಸಿಗಳು ಮುಚ್ಚುವುದಿಲ್ಲ. ಬೆಂಬಲ ಬೆಲೆ ನಿಲ್ಲಿಸುವುದಿಲ್ಲ. ಮಂಡಿಗಳನ್ನು ಮುಚ್ಚುವುದಿಲ್ಲ. ರೈತರಿಗೆ ಎಲ್ಲಿ ಲಾಭವಾಗುತ್ತೋ ಅಲ್ಲಿ ಅವರ ಉತ್ಪನ್ನ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗ್ತಿದೆ.

ಕೃಷಿ ಕಾಯ್ದೆಯಿಂದ ರೈತರ ಹಕ್ಕು ಕಸಿದುಕೊಳ್ಳುತ್ತಿಲ್ಲ. ಹಿರಿಯ ಸಚಿವರು ರೈತರ ಜೊತೆ ಚರ್ಚೆ ನಡೆಸ್ತಿದ್ದಾರೆ. ಹೋರಾಟ ಮಾಡ್ತಿರುವ ರೈತರನ್ನ ನಾವು ಗೌರವಿಸುತ್ತೇವೆ. ಕೃಷಿ ಕಾಯ್ದೆಗಳಿಂದ ತೊಂದರೆಯಿದ್ದರೆ ನಾವು ಬದಲಾಯಿಸಲು ಸಿದ್ಧ ಅನ್ನೋ ಮಾತನ್ನ ಪ್ರಧಾನಿ ಮೋದಿ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!