ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಎಲ್ಲೆಡೆ ಜಾಗತೀಕರಣದ ಹೆಸರಿನಲ್ಲಿ ನಡೆಯುತ್ತಿರುವ ಪರಿಸರ ವಿರೋಧಿ ಚಟುವಟಿಕೆಗಳಿಂದ ಮನುಷ್ಯನ ಬದುಕು ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ. ಶುದ್ಧ ಗಾಳಿ, ನೀರು, ಆಹಾರ ಸಿಗದೆ ಎಲ್ಲದರಲ್ಲೂ ಕಲುಷಿತ ಮಿಶ್ರಣವಾಗ್ತಿದೆ. ಇದ್ರಿಂದಾಗಿ ಪ್ರಾಣ ಕಳೆದುಕೊಳ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಲುಷಿತ ಗಾಳಿಗೆ ಕಳೆದ 2020ರಲ್ಲಿ ಬರೋಬ್ಬರಿ 12 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ದೆಹಲಿ ಪ್ರಥಮ ಹಾಗೂ ಮುಂಬೈ ದ್ವಿತೀಯ ಸ್ಥಾನದಲ್ಲಿದ್ದು, ಬೆಂಗಳೂರು 3ನೇ ಸ್ಥಾನದಲ್ಲಿದೆ. ಗ್ರೀನ್ ಪೀಸ್ ನಡೆಸಿದ ಅಧ್ಯಯನದ ವರದಿಯಿಂದ ಈ ವಿಚಾರ ಬೆಳಕಿಗೆ ಬಂದಿದೆ. ಇದು ಹೀಗೆ ಮುಂದುವರೆದ್ರೆ ಗಾರ್ಡನ್ ಸಿಟಿ ಮನುಷ್ಯ ವಾಸಿಸಲು ಯೋಗ್ಯವಲ್ಲದ ನಗರವಾಗಿ ಬದಲಾಗುವ ಸಾಧ್ಯತೆಯಿದೆ.
ಕರೋನಾ ಲಾಕ್ ಡೌನ್ ಸಮಯದಲ್ಲಿ ವಾಯುಮಾಲಿನ್ಯದಲ್ಲಿ ಸ್ವಲ್ಪ ಕಡಿಮೆಯಾಗಿತ್ತು. ಮತ್ತೆ ಇದೀಗ ಯಥಾಸ್ಥಿತಿ ಮುಂದುವರೆದಿದೆ. ದೆಹಲಿಯಲ್ಲಿ ಮಾಲಿನ್ಯದ ವೆಚ್ಚ 58 ಸಾವಿರ ಕೋಟಿ, ಮುಂಬೈ 26,912 ಕೋಟಿ ಹಾಗೂ ಬೆಂಗಳೂರು 12 ಸಾವಿರ ಕೋಟಿಯಾಗಿದೆ.