ಬ್ಯಾಂಕ್ ಗಳ ವಿಲೀನ ಖಂಡಿಸಿ ದೇಶ್ಯಾದ್ಯಂತ ಅಕ್ಟೋಬರ್ 22ರಂದು ಬ್ಯಾಂಕ್ ನೌಕರರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಠೇವಣಿಗಳ ಮೇಲಿನ ಬಡ್ಡಿ ದರ ಇಳಿಕೆ, ಬ್ಯಾಂಕ್ ಗಳ ವಿಲೀನ, ಹೊರಗುತ್ತಿಗೆ ಕೆಲಸಗಾರರ ನೇಮಕ ಸೇರಿದಂತೆ ಅನೇಕ ವಿಚಾರಗಳನ್ನ ಖಂಡಿಸಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಎರಡು ಸಂಘಟನೆಗಳು ಕರೆದ ಮುಷ್ಕರದಿಂದ ಬ್ಯಾಂಕ್ ಸೇವೆಯಲ್ಲಿ ತೊಂದರೆಯಾಗಲಿದೆ. ಈ ಸಂಘಟನೆಯಲ್ಲಿ ಹೆಚ್ಚಿನ ಸದಸ್ಯರು ಇಲ್ಲದ ಕಾರಣ, ಇದರ ಎಫೆಕ್ಟ್ ಅಷ್ಟಾಗಿ ಇರ್ಲಿಕಿಲ್ಲ ಎಂದು ಎಸ್ ಬಿಐ ಹೇಳಿದೆ. ಉದೇಶಿತ ಮುಷ್ಕರದ ದಿನಗಳಂದು ಕಚೇರಿಗಳ ಸುಗಮ ಕಾರ್ಯಕ್ಕೆ ಒತ್ತು ನೀಡಲಾಗ್ತಿದೆ. ಆದ್ರೂ, ತೊಂದರೆಯಾಗುವ ಸಾಧ್ಯತೆಯಿದೆ. ಸ್ಟೇಟ್ ಬ್ಯಾಂಕ್ ಇಂಡಿಯಾ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಮಹಾರಾಷ್ಟ್ರ ಸೇವೆ ನೀಡುವ ಬಗ್ಗೆ ಗ್ಯಾರೆಂಟಿ ನೀಡಿಲ್ಲ.