ಪ್ರಜಾಸ್ತ್ರ ಸುದ್ದಿ
ಸಿಂದಗಿ: ಪಟ್ಟಣದ ತಾಲೂಕು ಆಡಳಿತ ಸಭಾ ಭವನದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಿಸಲಾಯಿತು. ಕೋವಿಡ್ 19 ಮಾರ್ಗಸೂಚಿ ಹಿನ್ನೆಲೆಯಲ್ಲಿ ಅತ್ಯಂತ ಸರಳವಾಗಿ ಜಯಂತಿ ಆಚರಿಸಲಾಯಿತು.
ತಹಶೀಲ್ದಾರ್ ಸಂಜೀವಕುಮಾರ ದಾಸರ, ಗುರುದೇವ ಆಶ್ರಮದ ಜಗದ್ಗುರು ಶಾಂತಗಂಗಾಧರ ಮಹಾಸ್ವಾಮೀಜಿ, ತಳವಾರ ಸಮಾಜದ ತಾಲೂಕು ಅಧ್ಯಕ್ಷ ಶ್ರೀಶೈಲ ಬುಯ್ಯಾರ ನೇತೃತ್ವದಲ್ಲಿ ಸರ್ಕಾರಿ ನಿಯಮದಂತೆ ಅಂಬಿಗರ ಚೌಡಯ್ಯನವರ ಫೋಟೋಗೆ ಪೂಜೆ ಸಲ್ಲಿಸಿ ಜಯಂತಿ ಆಚರಿಸಲಾಯಿತು.
ಇದಕ್ಕೂ ಪೂರ್ವದಲ್ಲಿ ಪಟ್ಟಣದ ಸಿಂದಗಿ-ವಿಜಯಪುರ ರಸ್ತೆಯಲ್ಲಿರುವ ಅಂಬಿಗರ ಚೌಡಯ್ಯ ಸರ್ಕಲ್ ಬಳಿ ಸಮಾಜದ ಮುಖಂಡರು, ದಲಿತಪರ ಸಂಘಟನೆ ಮುಖಂಡರು, ಅಲ್ಪಸಂಖ್ಯಾತ ಸಂಘಟನೆ ಮುಖಂಡರು ಸೇರಿದಂತೆ ವಿವಿಧ ಸಮಾಜದ ಬಂಧು ಬಳಗದವರು ಕೂಡಿಕೊಂಡು ಜಯಂತಿ ಆಚರಿಸಿದರು.